ಕರ್ನಾಟಕ

karnataka

ಭಾರತ್ ಜೋಡೋ ಬಗ್ಗೆ ಕಾಂಗ್ರೆಸ್ ಪಶ್ಚಾತ್ತಾಪ ಪಡೆಬೇಕಿತ್ತು: ಸಚಿವ ಸುನಿಲ್ ಕುಮಾರ್

By

Published : Oct 2, 2022, 1:05 PM IST

Minister Sunil Kumar
ಸಚಿವ ಸುನೀಲ್ ಕುಮಾರ್

ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಭಾರತವನ್ನು ತುಂಡು ಮಾಡಿತ್ತು. ಸ್ವಾತಂತ್ರ್ಯ ನಂತರದ ಕಾಂಗ್ರೆಸ್ 370ವಿಧಿ ಕೊಟ್ಟು ರಾಜ್ಯ ರಾಜ್ಯವನ್ನು ತುಂಡು ಮಾಡಿತ್ತು ಎಂದು ಇಂಧನ ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.

ತುಮಕೂರು: ಭಾರತ್ ಜೋಡೋ ಬಗ್ಗೆ ಕಾಂಗ್ರೆಸ್ ಪಶ್ಚಾತ್ತಾಪ ಪಡೆಬೇಕಿತ್ತು. ಪಿಎಫ್ಐ ನಿಷೇಧ ಹಾಗೂ ಆರ್ಟಿಕಲ್ 370ನ್ನು ರದ್ದು ಮಾಡುವ ಮೂಲಕ ನಾವು ನಿಜವಾಗಿ ಭಾರತವನ್ನು ಒಂದು ಮಾಡಿದ್ದೇವೆ. ಭಾರತ್ ಜೋಡೋ ಪಾದಯಾತ್ರೆ ಮೂಲಕ ಉತ್ತರ ಭಾರತಕ್ಕೆ ಹೋಗುವಷ್ಟರಲ್ಲಿ ಕಾಂಗ್ರೆಸ್ ಇರೋದೆ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಟಾಂಗ್​ ನೀಡಿದರು.

ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ರಾಜಸ್ಥಾನ, ಬೇರೆ ಬೇರೆ ರಾಜ್ಯದ ಪರಿಸ್ಥಿತಿ ಏನಾಗಿದೆ ನೋಡಿ. ಭಾರತ್ ಜೋಡೋ ಬದಲು ಕಾಂಗ್ರೆಸ್ ಜೋಡೋ ಮಾಡಿ. ಪಾದಯಾತ್ರೆ ಜನಸ್ತೋಮ ನೋಡಿ ನಾವು ಭಯ ಪಡುವರಲ್ಲ. ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಅದಕ್ಕಿಂತ ಹೆಚ್ಚು ಜನ ಸೇರುತ್ತಾರೆ. ಯಾವುದೋ ಜನಸಂದಣಿ ನೋಡಿ ವಾತಾವರಣ ಬದಲಾಗುತ್ತದೆ ಎಂಬುದು ಸುಳ್ಳು. ಬಿಜೆಪಿ ಕಾರ್ಯಕರ್ತರ ಪಾರ್ಟಿ. ಪಕ್ಷವನ್ನು ಸಂಘಟನೆಗೊಳಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿರುದ್ಧ ಸಚಿವ ಸುನೀಲ್ ಕುಮಾರ್ ವಾಗ್ದಾಳಿ

ಸಿಎಂಗೆ ಪ್ರಸ್ತಾವನೆ:2014ರಲ್ಲಿ ವಿದ್ಯುತ್‌ ದರ ಹೆಚ್ಚಳ ಬಗ್ಗೆ ಅಂದಿನ ಸರ್ಕಾರ ನಿರ್ಣಯ ತೆಗೆದುಕೊಂಡಿತ್ತು. ಎಲ್ಲಾ ಕಂಪನಿಗಳು ಕೆಆರ್‌ಸಿ ಮುಂದೆ ಅಪೀಲ್‌ ಹೋಗಿ ಅದರಂತೆ ದರ ಹೆಚ್ಚಳ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿಗಳಿಂದ ಪಾವತಿ ಆಗಬೇಕಾದ ವಿದ್ಯುತ್‌ ಬಿಲ್‌ಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆರ್‌ಡಿಪಿಆರ್‌ ಇಲಾಖೆಯಿಂದ ಬಾಕಿ ಇರುವ ಬಿಲ್‌ನ್ನು ರಾಜ್ಯ ಸರ್ಕಾರದಿಂದ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಗ್ರಾಹಕರಿಗೆ ಹೊರೆಯಾಗದ ಹಾಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಮುಂದೆ ಪ್ರಸ್ತಾವನೆ ಇಡಲಾಗಿದೆ. ಕಳೆದ 7 ವರ್ಷಗಳಲ್ಲಿ ದರದಲ್ಲಿ ಹೆಚ್ಚು ಕಡಿಮೆ ಎರಡೂ ಆಗಿದೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನೀರಾವರಿ ಇಲಾಖೆಯಿಂದ ಕಳೆದ ವರ್ಷದ ಬಿಲ್ ಬಂದಿದೆ. ಈ ವರ್ಷದ್ದು ಬರುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆ ಸರ್ಕಾರಿ ಕಚೇರಿಗಳಿಗೆ ಪ್ರಿಪೇಯ್ಡ್ ಮೀಟರ್ ಅಳವಡಿಸುವ ಯೋಜನೆ ಕೈಗೊಳ್ಳುತ್ತೇವೆ. ವಿದ್ಯುತ್ ಸೋರಿಕೆ ಶೇ.7ರಷ್ಟು ಇದ್ದುದನ್ನು ಶೇ.4 ಕ್ಕೆ ಇಳಿಸಿದ್ದೇವೆ. ಅದನ್ನ ಇನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದರು.

ರೈತರ ಪಂಪ್ ಸೆಟ್​​ಗೆ ಮೀಟರ್ ಅಳವಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತ, ಯಾವುದೇ ಕಾರಣಕ್ಕೆ ರೈತರ ಪಂಪ್ ಸೆಟ್​ಗೆ ಮೀಟರ್ ಅಳವಡಿಸುವ ಪ್ರಸ್ತಾವನೆ ಇಲ್ಲ. ಈ ವಿಚಾರದಲ್ಲಿ ಅಪಪ್ರಚಾರ ನಡೆಯುತ್ತಿದೆ. ಸೋಲಾರ್ ಫೀಡರ್ ಮೂಲಕ ಎರಡೂವರೆ ಲಕ್ಷ ರೈತರಿಗೆ ವಿದ್ಯುತ್ ಕೊಡುವ ಪ್ರಯತ್ನ ನಡೆಯುತ್ತಿದೆ. ಅಮೃತ ಜ್ಯೋತಿ ಯೋಜನೆ ಅಡಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ 75 ಯುನಿಟ್ ವಿದ್ಯುತ್ ಉಚಿತ ಹಾಗೂ ಜಿವಿಪಿ ಖಾಯಂ ಮಾಡಲು ಕೋರ್ಟ್​ನ ಅಡೆತಡೆ ಇದೆ ಎಂದರು.

ಇದನ್ನೂ ಓದಿ:ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ: ಮಹಾತ್ಮನಿಗೆ ನಮನ ಸಲ್ಲಿಸಿ ಭಜನೆ... ಖಾದಿ ಕೇಂದ್ರಕ್ಕೆ ರಾಹುಲ್ ಭೇಟಿ

ABOUT THE AUTHOR

...view details