ಕರ್ನಾಟಕ

karnataka

ಮೊಬೈಲ್ ನೀಡದ ಯುವಕನ‌ ಕುತ್ತಿಗೆಗೆ ಚಾಕು ಇರಿತ: ಪೊಲೀಸರಿಂದ ತಲಾಷ್

By

Published : Oct 31, 2022, 6:46 AM IST

ಮೊಬೈಲ್​ ಕಳ್ಳತನ್ಕಕೆ ಬಂದವರಿಗೆ ಪ್ರತಿರೋಧ ತೋರಿಸಿದ್ದಕ್ಕೆ ಚಾಕುವಿನಿಂದ ಕುತ್ತಿಗೆಗೆ ಇರಿದು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Etv Bharat
ಮೊಬೈಲ್ ನೀಡದ ಯುವಕನ‌ ಕುತ್ತಿಗೆಗೆ ಚಾಕು ಇರಿತ

ಶಿವಮೊಗ್ಗ:ಮೊಬೈಲ್ ಕದಿಯಲು ಬಂದಿದ್ದ ಖದೀಮರು ಮೊಬೈಲ್ ನೀಡಲಿಲ್ಲ ಎಂದು ವ್ಯಕ್ತಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ನಗರದ ಬಿ.ಹೆಚ್.ರಸ್ತೆಯ ರಾಯಲ್​ ಆರ್ಕಿಡ್ ಮುಂಭಾಗ ನಡೆದು‌ಕೊಂಡು ಹೋಗುತ್ತಿದ್ದ ಅಶೋಕ್ ಪ್ರಭು ಎಂಬುವರ ಮೊಬೈಲ್ ಕದಿಯಲು ಬಂದಿದ್ದಾರೆ.

ಈ ವೇಳೆ ಮೊಬೈಲ್ ನೀಡುವುದಕ್ಕೆ ಅಶೋಕ ಪ್ರಭು ವಿರೋಧ ಮಾಡಿದ್ದಕ್ಕೆ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಎರಡು ಬೈಕ್​ನಲ್ಲಿ ಬಂದ ನಾಲ್ವರು ಚಾಕು ಇರಿತವಾದ ತಕ್ಷಣ ಪರಾರಿಯಾಗಿದ್ದಾರೆ. ತಕ್ಷಣ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸದ್ಯ ಅಶೋಕ ಪ್ರಭು ಅವರು ಪ್ರಾಣಾಪಾಯದಿಂದ ಪರಾಗಿದ್ದಾರೆ. ಚಾಕು ಇರಿದ ದುಷ್ಕರ್ಮಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದು, ಸಮೀಪ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ಜ್ಯೋತಿಷಿಯ ಮಾತು ನಂಬಿದ ಯುವತಿ.. ಪ್ರಿಯಕರನಿಗೆ ವಿಷ ಹಾಕಿ ಕೊಂದ ಪ್ರಿಯತಮೆ!

ABOUT THE AUTHOR

...view details