ಕರ್ನಾಟಕ

karnataka

ರಾಯಚೂರು: ಮನೆ ಬೀಗ ಮುರಿದು ಚಿನ್ನಾಭರಣ, ನಗದು ದೊಚ್ಚಿದ ಕಳ್ಳರು

By

Published : Nov 11, 2022, 2:22 PM IST

ಮಾನ್ವಿ ಪಟ್ಟಣದ ವಿಜಯನಗರ ಕಾಲೋನಿಯಲ್ಲಿ ಬುಧವಾರ ತಡರಾತ್ರಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ.

thieves stole gold and cash in houses at manvi
ಮನೆಗಳಲ್ಲಿ ಕಳ್ಳತನ

ಮಾನ್ವಿ(ರಾಯಚೂರು):ಮಾನ್ವಿ ಪಟ್ಟಣದ ವಿಜಯನಗರ ಕಾಲೋನಿಯಲ್ಲಿ ಬುಧವಾರ ತಡರಾತ್ರಿ ಎರಡು ಮನೆಗಳಲ್ಲಿ ಕಳ್ಳತನವಾಗಿದೆ. ಮಾಲೀಕರು ಮನೆಯಲ್ಲಿಲ್ಲದ ವೇಳೆ ಖದೀಮರು ಮನೆಯ ಬಾಗಿಲು ಮುರಿದು ಒಳನುಗ್ಗಿ ಹತ್ತೂವರೆ ತೊಲೆ ಚಿನ್ನಾಭರಣ ಹಾಗೂ ಅಂದಾಜು ಒಂದು ಲಕ್ಷ ರೂಪಾಯಿ ಹಣ ಕಳವು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರಿಗೆ ಬಲೆ ಬೀಸಿದ್ದಾರೆ.

ABOUT THE AUTHOR

...view details