ಕರ್ನಾಟಕ

karnataka

ಶಿವಾಜಿ ಮಹಾರಾಜರು ಭಾರತದ ಚರಿತ್ರೆ ಬದಲಾವಣೆ ಮಾಡಿದ ಯುಗಪುರುಷ-ಸಿ ಎಂ ಬಸವರಾಜ ಬೊಮ್ಮಾಯಿ

By

Published : Feb 19, 2023, 8:00 PM IST

ಶಿವಾಜಿ ಮಹಾರಾಜರ 396 ನೇ ಜಯಂತಿ ಕಾರ್ಯಕ್ರಮ
ಶಿವಾಜಿ ಮಹಾರಾಜರ 396 ನೇ ಜಯಂತಿ ಕಾರ್ಯಕ್ರಮ

ಶಿವಾಜಿ ಮಹಾರಾಜರು ಒಬ್ಬ ಸಾಧಕರು. ಸದಾ ನಮಗೆ ಪ್ರೇರಣೆ ನೀಡುವಂತಹ ಶಕ್ತಿ-ಸಿಎಂ ಬಸವರಾಜ ಬೊಮ್ಮಾಯಿ.

ಸಿ ಎಂ ಬಸವರಾಜ ಬೊಮ್ಮಾಯಿ

ಹಾವೇರಿ:ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಚರಿತ್ರೆ ಬದಲಾವಣೆ ಮಾಡಿದ ಯುಗಪುರುಷ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ನಡೆದ ಶಿವಾಜಿ ಮಹಾರಾಜರ 396 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಾಜಿ ಮಹಾರಾಜರು ದೇಶದ ಚರಿತ್ರೆ ಬದಲಾಯಿಸಿದ್ದಲ್ಲದೆ ಹೊಸ ಚರಿತ್ರೆಯನ್ನ ರಚನೆ ಮಾಡಿ ಚಾರಿತ್ರ್ಯವಂತ ಸಮಾಜ ನಿರ್ಮಾಣ ಮಾಡಲು ಅವರು ಮಾಡಿರುವ ಕೆಲಸಗಳು ಮಾದರಿಯಾಗಿವೆ ಎಂದು ಸಿಎಂ ತಿಳಿಸಿದರು.

ಶಿವಾಜಿ ಮಹಾರಾಜರಿಗೆ ಕೊಂಡೋಜಿ ಎಂಬ ಗುರು ಶಸ್ತ್ರ ವಿದ್ಯೆ ಕಲಿಸಿದ್ದರು. ಶಿವಾಜಿ ಮಹಾರಾಜರು ಶಸ್ತ್ರವಿದ್ಯೆ ಮತ್ತು ಶಾಸ್ತ್ರ ವಿದ್ಯೆಯನ್ನು ಬೇಗನೆ ಕಲಿತರು. ಅವರ ಎದೆಯಲ್ಲಿ ಧೈರ್ಯ, ಸ್ಥೈರ್ಯ ಮತ್ತು ಆತ್ಮಬಲ ಜೋಡಿಸಿ ಶಿವಾಜಿ ಮಹಾರಾಜರು ಗೆರಿಲ್ಲಾ ಯುದ್ಧ ಕಲೆಯಿಂದ ಬೇರೆ ಬೇರೆ ಪ್ರಾಂತ್ಯಗಳನ್ನ ವಶಪಡಿಸಿಕೊಂಡು ಹಿಂದೂ ಸಮಾಜಕ್ಕೆ ಆಡಳಿತಗಾರರ ಮೇಲೆ ಬಂದ ಸಂಚನ್ನು ಧೈರ್ಯವಾಗಿ ಎದುರಿಸಿದ್ದರು. ಇದರಿಂದಾಗಿ ಅತಿಕ್ರಮಣ ಮತ್ತು ಆಕ್ರಮಣ ಎರಡನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಶಿವಾಜಿ ಪರಾಕ್ರಮದ ಕುರಿತು ಬಣ್ಣಿಸಿದರು.

ಶಿವಾಜಿ ಮಹಾರಾಜರು ಒಬ್ಬ ಸಾಧಕರು. ಸದಾ ನಮಗೆ ಪ್ರೇರಣೆ ನೀಡುವಂತಹ ಶಕ್ತಿ. ಬದುಕಿದ್ದಾಗ ಕೆಲವರು ಬಹಳ ಜನಪ್ರಿಯರಾಗಿರುತ್ತಾರೆ. ಬದುಕಿನ ನಂತರವೂ ಅಷ್ಟೇ ಪ್ರಬಲ ಜನಪ್ರಿಯತೆ ಹೊಂದಿದವರು ವಿರಳ. ಇವರೆಲ್ಲಾ ಯುಗಪುರುಷರು. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಮತ್ತು ಸುಭಾಶ್​ ಚಂದ್ರ ಬೋಸ್ ಸಹ ಯುಗಪುರುಷರು ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ :ಚಿಕ್ಕಮಗಳೂರು ಜನ ಭಾವನಾತ್ಮಕ ವಿಚಾರ ಬಿಟ್ಟು, ಜೀವನದ ಬಗ್ಗೆ ಯೋಚಿಸುತ್ತಿದ್ದಾರೆ: ಡಿ ಕೆ ಶಿವಕುಮಾರ್​

ಇವರಿಗಿಂತ ಪೂರ್ವದಲ್ಲಿ ಭಾರತ ದೇಶದ ಸ್ವಾಭಿಮಾನಿ ಇಡೀ ಭಾರತದ ಸ್ವಾತಂತ್ರ್ಯ ಸಂಕಷ್ಟದಲ್ಲಿದ್ದಾಗ ಭಾರತವನ್ನು ಗುಲಾಮಗಿರಿಗೆ ಒಡ್ಡುವ ಸಮಯದಲ್ಲಿ ಅದಕ್ಕೆ ಪ್ರಬಲವಾದ ತಡೆಯೊಡ್ಡಿ, ಭಾರತದ ಧರ್ಮ, ಸಂಸ್ಕೃತಿ, ಪರಂಪರೆ ಇವೆಲ್ಲವನ್ನ ಕೂಡ ಉಳಿಸಿ ಮರುಸ್ಥಾಪನೆ ಮಾಡಿರುವ ಧೀಮಂತರಿದ್ದರೆ ಅದು ಛತ್ರಪತಿ ಶಿವಾಜಿ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ಸಿ ಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ :ರಾಜೀವ್, ಇಂದಿರಾ ಗಾಂಧಿ ಹತ್ಯೆಯಂತೆ ಸಿದ್ದರಾಮಯ್ಯನವರನ್ನು ಗುರಿ ಮಾಡಲಾಗಿದೆ: ಸುರ್ಜೇವಾಲಾ ಆರೋಪ

ರಾಜ್ಯದಲ್ಲಿ ಎಲ್ಲ ವರ್ಗದವರು ಎಲ್ಲ ಭಾಷಿಗರು ಎಲ್ಲ ಪಂತವನ್ನು ಗೌರವಿಸುವ ಬಗ್ಗೆ ನಮ್ಮ ಹಿರಿಯರು ಹಾಕಿಕೊಟ್ಟಿದ್ದಾರೆ. ಆದರೆ ಕನ್ನಡಕ್ಕೆ ಅಗ್ರಸ್ಥಾನ ಕನ್ನಡಿಗರಿಗೆ ಅಗ್ರಸ್ಥಾನ ಕನ್ನಡ ಮಣ್ಣಿನಲ್ಲಿರುವವರು ಕನ್ನಡಿಗರು. ಎಲ್ಲರಿಗೂ ಗೌರವ ನೀಡುವುದು ನಮ್ಮ ಮೂಲಮಂತ್ರ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಹ ಎಲ್ಲ ಕಾರ್ಯ ಮುಟ್ಟಬೇಕು ಎಂದು ಹೇಳಿದರು.

ಇದನ್ನೂ ಓದಿ :ಕೆಲವರು ನಮ್ಮ ಪಕ್ಷವನ್ನು ಲಘುವಾಗಿ ಪರಿಗಣಿಸಿದ್ದು, ಚುನಾವಣೆಯಲ್ಲಿ ಉತ್ತರ ಸಿಗಲಿದೆ: ಹೆಚ್​ಡಿಕೆ

ನಾನು ಜನಪ್ರಿಯ ಬಜೆಟ್ ಮಂಡಿಸಿಲ್ಲ. ಬದಲಿಗೆ ಜನಪರ ಬಜೆಟ್ ಮಂಡಿಸಿದ್ದೇನೆ ಎಂದು ಇದೇ ವೇಳೆ ಬೊಮ್ಮಾಯಿ ಸಮರ್ಥಿಸಿಕೊಂಡರು. ಕಾರ್ಮಿಕರಿಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರೈತರು ಯುವಕರಿಗೆ ಬಡವರಿಗೆ ದೀನ ದಲಿತರನ್ನ ದೃಷ್ಠಿಯಲ್ಲಿಟ್ಟುಕೊಂಡು ಬಜೆಟ್ ರಚನೆ ಮಾಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಸರ್ವರಿಗೂ ಸಮಪಾಲು, ಸಮಬಾಳು ಒದಗಿಸುವ ನಿಟ್ಟಿನಲ್ಲಿ ಈ ಬಜೆಟ್ ಮಂಡಿಸಿದ್ದಾಗಿ ವಿವರಿಸಿದರು.

ಇದನ್ನೂ ಓದಿ :ಸಿದ್ದರಾಮಯ್ಯ ಮಾತು ತಪ್ಪಿದ ಮಗ: ಬಸವರಾಜ ಬೊಮ್ಮಾಯಿ ವಾಗ್ದಾಳಿ

ABOUT THE AUTHOR

...view details