ಕರ್ನಾಟಕ

karnataka

ರೈತರ ಮಕ್ಕಳನ್ನು ಮದುವೆಯಾದ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ.. ಕುಮಾರಸ್ವಾಮಿ ಅಭಯ

By

Published : Mar 10, 2023, 3:26 PM IST

ರೈತರ ಮಕ್ಕಳನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ 2 ಲಕ್ಷ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಜಾರಿಗೊಳಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

ಹಾಸನ (ಅರಸೀಕೆರೆ):ನೋಡಿ ನಮ್ದು ರೈತರ ಪಕ್ಷ. ಪ್ರಾದೇಶಿಕ ಪಕ್ಷ ಇಲ್ಲದೇ ಒಂದು ರಾಜ್ಯ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ನಮ್ಮ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳನ್ನ ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ರೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಪಂಚರತ್ನ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡುತ್ತಾ, ರೈತರ ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಕಂಕಣ ಭಾಗ್ಯ ಕೂಡಿ ಬರಲಿ ಅಂತ ಅವಿವಾಹಿತ ರೈತ ಸಮುದಾಯದ ಯುವಕರು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ರೈತರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ನಮ್ಮ ಪಂಚರತ್ನ ರಥಯಾತ್ರೆಯ ಪ್ರಣಾಳಿಕೆಯಲ್ಲಿ ಈ ವಿಚಾರವನ್ನು ಸೇರ್ಪಡೆ ಮಾಡಿದ್ದು, ರೈತರ ಮಕ್ಕಳನ್ನ ಮದುವೆಯಾಗುವ ಯುವತಿಯರಿಗೆ 2 ಲಕ್ಷ ಪ್ರೋತ್ಸಾಹ ಧನ ನೀಡುವ ಮಹತ್ವದ ಯೋಜನೆಯನ್ನು ಜಾರಿಗೊಳಿಸುತ್ತೇನೆ ಎಂದು ಹೇಳಿದರು.

ಬಡವರ ಕಷ್ಟವನ್ನು ಗಮನಿಸಿದ್ದೇನೆ - ಹೆಚ್​ಡಿಕೆ: ನಾವು ಅಧಿಕಾರದಲ್ಲಿ ಇರಲಿ ಅಥವಾ ಇರದೇ ಇರಲಿ, ನಾವು ಯಾವ ಕಾರ್ಯಕರ್ತರಿಗೂ ಒತ್ತಡ ಹಾಕಿಲ್ಲ. ಈಗ ಆರೋಪ ಮಾಡುವವರು ಮೊದಲು ಯಾಕೆ ಆರೋಪ ಮಾಡಲಿಲ್ಲ.? ನಮ್ಮ ಪಕ್ಷಕ್ಕೆ ಹಣದ ಕೊರತೆ ಇದೆ ನಿಜ. ಪಕ್ಷದ ಹಿತ ದೃಷ್ಟಿಗೆ ಯಾರೋ ನಾಲ್ಕು ಮಂದಿ ಪುಣ್ಯಾತ್ಮರು ಹಣವನ್ನು ನೀಡುತ್ತಾರೆ. ಆ ಹಣವನ್ನು ಇಟ್ಟುಕೊಂಡು ಸುಖ-ಮನೆ ಖರ್ಚು ಮಾಡಲು ಸಾಧ್ಯವಿಲ್ಲ. ಬಡವರ ಕಷ್ಟವನ್ನು ಗಮನಿಸಿದ್ದೇನೆ. ಅವರ ಕಷ್ಟವನ್ನು ನಿವಾರಣೆ ಮಾಡಲು ನಾನು ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇನೆ ಎಂದರು.

ಯಾವ ಪುರುಷಾರ್ಥಕ್ಕೆ ಮತ್ತೆ ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು? ನೀರಾವರಿ ಯೋಜನೆ ಏನೇನಾಗಿದೆ ಎಂಬುದು ನಿಮಗೆ ಗೊತ್ತಿದೆ. ಮಹದಾಯಿ ಯೋಜನೆ ನಾವು ಮಾಡ್ತೀವಿ ಅಂತ ಸಿಹಿ ಹಂಚಿಕೆ ಮಾಡಿದರು. ಕೆಲಸ ಪ್ರಾರಂಭವಾಯಿತಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ :ಬಿಜೆಪಿ ಚುನಾವಣಾ ಪ್ರಚಾರ ಸಮಿತಿಗೆ ಸಿಎಂ ಬೊಮ್ಮಾಯಿ ಅಧ್ಯಕ್ಷ : ಬಿಎಸ್​ವೈ, ವಿಜಯೇಂದ್ರ, ರಮೇಶ್​ ಜಾರಕಿಹೊಳಿಗೂ ಸ್ಥಾನ

ಹಳೆ ಮೈಸೂರು ಭಾಗದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಬಗ್ಗೆ ಟಾರ್ಗೆಟ್ ಇಟ್ಟಿದ್ದಾರೆ. ಆ ಟಾರ್ಗೆಟ್ ಈ ಬಾರಿ ಅವರಿಗೆ ವರ್ಕೌಟ್ ಆಗಲ್ಲ. ರಾಜ್ಯಕ್ಕೆ ಅಮಿತ್ ಶಾ ಬಂದಾಗ ಜೆಡಿಎಸ್​ಗೆ ಮತ ಕೊಟ್ಟರೆ ಅದು ಕಾಂಗ್ರೆಸ್​ಗೆ ಕೊಟ್ಟ ಹಾಗೆ ಎಂದು ಹೇಳ್ತಾರೆ. ಇನ್ನು ಸಿದ್ದರಾಮಯ್ಯ ಹೇಳ್ತಾರೆ ಜೆಡಿಎಸ್​​ಗೆ ಮತ ಕೊಟ್ರೆ ಬಿಜೆಪಿಗೆ ಕೊಟ್ಟಾಗೆ. ಅದು ಬಿಜೆಪಿಯ ಬಿ ಟಿಂ ಎಂದು ಹೇಳ್ತಾರೆ.

ಎರಡು ರಾಷ್ಟ್ರೀಯ ಪಕ್ಷಗಳಿಗೂ ಆತಂಕ : ರಾಜ್ಯದಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದ್ದು, ಇದು ಎರಡು ರಾಷ್ಟ್ರೀಯ ಪಕ್ಷಗಳಿಗೂ ಆತಂಕಕ್ಕೆ ಸೃಷ್ಟಿಯಾಗಿದೆ. ನಮ್ಮ ಜೆಡಿಎಸ್ ಭದ್ರಕೋಟೆಗಳನ್ನ ಚಿದ್ರ ಮಾಡ್ತೀನಿ ಅಂತ ಹೊರಟಿರುವ ಅವರ ಕನಸು ನನಸಾಗದು. ದೇವೇಗೌಡರು ಬೆಳೆಸಿರುವ ಲಕ್ಷಾಂತರ ಕಾರ್ಯಕರ್ತರು ಈ ಪಕ್ಷದ ಶಕ್ತಿ. ಅವರು ಇರುವ ತನಕ ನಮ್ಮ ಪಕ್ಷವನ್ನ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ :ಬೊಮ್ಮಾಯಿ ತವರು ಪ್ರೀತಿ: ಅಧಿಕಾರದ ಕಡೆ ದಿನಗಳಲ್ಲಿ ನಿಗಮ, ಮಂಡಳಿಗೆ ಬೆಂಬಲಿಗರ ನೇಮಕ!

ABOUT THE AUTHOR

...view details