ಕರ್ನಾಟಕ

karnataka

ದಾವಣಗೆರೆ : ಒಂಟಿ ಮನೆಯಲ್ಲಿ ಮಾಲೀಕನನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ಖದೀಮರು

By

Published : Sep 20, 2021, 4:49 PM IST

ಮಾಲೀಕನನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ಖದೀಮರು

ಈ ಕುರಿತು ದಂಪತಿ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಶ್ವಾನ ದಳದೊಂದಿಗೆ ಆಗಮಿಸಿದ ಚನ್ನಗಿರಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ‌ ಬೀಸಿದ್ದಾರೆ..

ದಾವಣಗೆರೆ :ಒಂಟಿ ಮನೆಯನ್ನು ಗುರಿಯಾಗಿಸಿಕೊಂಡು ನುಗ್ಗಿದ ಡಕಾಯಿತರ ತಂಡ, ಮನೆ‌ ಮಾಲೀಕನನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿ ಪಾರಾರಿಯಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಹೊರ ವಲಯದ ತೋಟದ‌ ಮನೆಯಲ್ಲಿ ಜರುಗಿದೆ. ಘಟನೆ ನಡೆದು ಮೂರು ದಿನಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಒಂಟಿ ಮನೆಗೆ ನುಗ್ಗಿದ 7 ರಿಂದ 8 ಜನರಿದ್ದ ಕಳ್ಳರ ಗುಂಪು ಶಿವಮೂರ್ತಪ್ಪ ಹಾಗೂ ಅವರ ಪತ್ನಿ ರತ್ನಮ್ಮ ಅವರನ್ನ ಕಟ್ಟಿ ಹಾಕಿ ಲಾಕರ್​​ನಲ್ಲಿದ್ದ 16 ಲಕ್ಷ ನಗದು, 15 ಲಕ್ಷ ಬೆಲೆಬಾಳುವ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಖದೀಮರು ದೋಚಿದ್ದಾರೆ.

ಈ ಕುರಿತು ದಂಪತಿ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಶ್ವಾನ ದಳದೊಂದಿಗೆ ಆಗಮಿಸಿದ ಚನ್ನಗಿರಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ‌ ಬೀಸಿದ್ದಾರೆ.

ABOUT THE AUTHOR

...view details