ಚಿಕ್ಕಮಗಳೂರು:ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಿಂದ 200 ಮೀಟರ್ ದೂರದಲ್ಲಿ 2004 ರಲ್ಲಿ ದತ್ತಪೀಠದಲ್ಲಿ ಮಾಂಸದ ಅಂಗಡಿಯೇ ಇತ್ತು, ದತ್ತಪೀಠದಲ್ಲಿ ಮಾಂಸ ಮಾಡಲು ಅನುಮತಿ ನೀಡಿ ಎಂದು ಟಿಪ್ಪು ಸುಲ್ತಾನ್ ಹಾಗೂ ಬಾಬಾಬುಡನ್ ಗಿರಿ ಸಮಿತಿಯಿಂದ ಡಿಸಿಗೆ ಮನವಿ ನೀಡಲಾಗಿದೆ ಎಂದು ಬಾಬಾ ಬುಡನ್ ಗಿರಿ ಸಮಿತಿ ಅಧ್ಯಕ್ಷ ಸಿರಾಜ್ ತಿಳಿಸಿದ್ದಾರೆ.
ಹರಕೆ ತೀರಿಸಲು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಪೊಲೀಸರು, ತಹಶೀಲ್ದಾರ್, ಕೆಲ ಸಂಘಟನೆಗಳು ಮಾಂಸ ಮಾಡಬೇಡಿ ಅಂತಾರೆ. ದತ್ತಪೀಠದಲ್ಲಿ ಮಾಂಸಹಾರ ತಯಾರಿಸಲು ನಿಷೇಧ ಇರಲಿಲ್ಲ. ಕೋರ್ಟ್ ಆದೇಶವಿಲ್ಲದೇ ಜಿಲ್ಲಾಡಳಿತ ಮಾಂಸಹಾರಕ್ಕೆ ನಿಷೇಧ ಹೇರಿದ್ದು ತಪ್ಪು ಎಂದರು.