ಕರ್ನಾಟಕ

karnataka

ಮೂಡಿಗೆರೆಯಲ್ಲಿ ಭೀಕರ ಅಪಘಾತ.. ಬೈಕ್​ ಸವಾರನ ತಲೆ ಮೇಲೆ ಹರಿದ ಬಸ್

By

Published : Oct 21, 2021, 4:20 PM IST

Updated : Oct 21, 2021, 9:10 PM IST

ಬಸ್-ಬೈಕ್ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೂಡಿಗೆರೆ ತಾಲೂಕಿನಲ್ಲಿ ಅಪಘಾತ ಸಂಭವಿಸಿದೆ.

ಅಪಘಾತ
ಅಪಘಾತ

ಚಿಕ್ಕಮಗಳೂರು: ಬೈಕ್​ಗೆ ಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​​ನಲ್ಲಿ ನಡೆದಿದೆ. ಬೈಕ್ ಸವಾರ ರಾಜೇಶ್ (24) ಮೃತ ವ್ಯಕ್ತಿ.

ಬೈಕ್​ನಲ್ಲಿ ಹಿಂಬದಿ ಕುಳಿತಿದ್ದ ಅಶೋಕ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ಡಿಕ್ಕಿ ಬಳಿಕ ಕೆಳಗೆ ಬಿದ್ದ ರಾಜೇಶ್ ಮೇಲೆ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Last Updated :Oct 21, 2021, 9:10 PM IST

ABOUT THE AUTHOR

...view details