ಕರ್ನಾಟಕ

karnataka

ಅಂಬೇಡ್ಕರ್ ಜಯಂತಿಯನ್ನು ಮನೆಯಲ್ಲೇ ಆಚರಿಸಿ, ಗೌರವಿಸಿ: ಶಾಸಕ ಎನ್.ಮಹೇಶ್

By

Published : Apr 10, 2020, 1:34 PM IST

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಿ ಕಾನೂನಿಗೆ ಭಂಗ ತರುವ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂದು ಶಾಸಕ‌ ಎನ್.ಮಹೇಶ್ ಜನತೆಯಲ್ಲಿ ಮನವಿ ಮಾಡಿದ್ದಾರೆ.

MLA Mahesh
ಶಾಸಕ ಎನ್. ಮಹೇಶ್

ಕೊಳ್ಳೇಗಾಲ : ಏಪ್ರಿಲ್ 14 ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟಿದ ದಿನ. ಈ ಬಾರಿ ಕೊರೊನಾ ವೈರಸ್ ಅಬ್ಬರಕ್ಕೆ ದೇಶ ನಡುಗಿದೆ. ಹೀಗಾಗಿ ಅಂಬೇಡ್ಕರ್ ಜನ್ಮದಿನವನ್ನು ಮನೆಯೊಳಗೆ ದೀಪ ಹಚ್ಚಿ, ಸಿಹಿ ತಯಾರಿಸಿ ಸರಳವಾಗಿ ಆಚರಿಸುವಂತೆ ಎಂದು ಶಾಸಕ‌ ಎನ್.ಮಹೇಶ್ ಕರೆ ನೀಡಿದ್ದಾರೆ.

ಶಾಸಕ ಎನ್. ಮಹೇಶ್
ಜಯಂತಿಯನ್ನು ಮನೆಯೊಳಗೆ ದೀಪ ಹಚ್ಚಿ, ಸಿಹಿ ಊಟ ಮಾಡಿ ಆಚರಿಸಿ. ಜೊತೆಗೆ ಬಾಬಾ ಸಾಹೇಬರ ಪುಸ್ತಕಗಳನ್ನು ಓದಿ ಪಾರಾಯಣ ಮಾಡಿ. ಆ ಸಂದೇಶವನ್ನು ಇತರರಿಗೂ ತಿಳಿಸಿ ದೇಶದ ಕಾನೂನನ್ನು ಗೌರವಿಸುವಂತೆ ಅವರು ಮನವಿ ಮಾಡಿದ್ದಾರೆ.

ABOUT THE AUTHOR

...view details