ಕರ್ನಾಟಕ

karnataka

ಸಚಿವ ಶ್ರೀರಾಮುಲು ಮಾತಿಗೆ ಮಣಿಯದ ಕವಿರಾಜ: ಬಿಜೆಪಿಗೆ ಕಗ್ಗಂಟಾದ ವಿಜಯನಗರ

By

Published : Nov 17, 2019, 2:26 PM IST

ಆರೋಗ್ಯ ಸಚಿವ ಶ್ರೀರಾಮುಲು ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್ ಅವರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ಈಗಾಗಲೇ ಬಿಜೆಪಿಯಿಂದ ಆನಂದ್​ ಸಿಂಗ್​ಗೆ ಟಿಕೆಟ್​ ನೀಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.

ಕವಿರಾಜ ಅರಸ್ ಅವರನ್ನು ಮನವೊಲಿಸುವಲ್ಲಿ ವಿಫಲವಾದ ಸಚಿವ ಶ್ರೀರಾಮಲು

ಹೊಸಪೇಟೆ: ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್ ಅವರನ್ನು ಮನವೊಲಿಸಲು ತೆರಳಿದ್ದ ಸಚಿವ ಶ್ರೀರಾಮುಲು ಪ್ರಯತ್ನ ಫಲ ನೀಡಿಲ್ಲ.

ಕವಿರಾಜ ಅರಸ್ ಅವರನ್ನು ಮನವೊಲಿಸುವಲ್ಲಿ ವಿಫಲವಾದ ಸಚಿವ ಶ್ರೀರಾಮಲು

ವಿಜಯನಗರದ ಕ್ಷೇತ್ರದಲ್ಲಿ ಉಪಚುನಾವಣೆಯು ದಿನದಿಂದ ದಿನಕ್ಕೆ ರಣರಂಗವಾಗುತ್ತಿದ್ದು, ಕವಿರಾಜ ಅರಸ್ ಅವರನ್ನು ಮನವೊಲಿಸುವಲ್ಲಿ ಸಚಿವ ಶ್ರೀರಾಮುಲು ವಿಫಲವಾಗಿದ್ದಾರೆ. ಇನ್ನೂ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಕ್ಷೇತ್ರದ ಜನರ ಬೆಂಬಲದಿಂದ ಗೆದ್ದು ಬರುವೆ ಎಂಬ ವಿಶ್ವಾಸವನ್ನು ಕವಿರಾಜ ಅರಸ್ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಉಪಚುನಾವಣೆಯಲ್ಲಿ ಬಿಜೆಪಿ ಆನಂದ ಸಿಂಗ್ ಅವರಿಗೆ ಟಿಕೆಟ್ ನೀಡಿದ್ದು, ಅವರ ವಿರುದ್ಧವಾಗಿ ನಾಮ ಪತ್ರವನ್ನು ಸಲ್ಲಿಸುತ್ತೇನೆಂದು ಕವಿರಾಜ ಅರಸ್​ ತಿಳಿಸಿದ್ದಾರೆ.

Intro:ಬಂದ ದಾರಿಗೆ ಸುಂಕವಿಲ್ಲ : ಮನೋವೊಲಿಸುವಲ್ಲಿ ವಿಫಲವಾದ ಸಚಿವ ಶ್ರೀರಾಮಲು
ಹೊಸಪೇಟೆ : ವಿಜಯ ನಗರ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿ ಆನಂದ ಸಿಂಗ್ ಅವರಿಗೆ ಟಿಕೆಟ್ ನೀಡಬಾರದು ಎಂದು ಆದರ ಪಕ್ಷದವರು ಅವರಿಗೆ ಟಿಕೇಟ್ ನೀಡಿದ್ದಾರೆ. ಅದಕ್ಕಾಗಿ ಅವರು ವಿರುದ್ದವಾಗಿ ಬಿಜೆಪಿಯ ಬಂಡಾಯವಾಗಿ ನಾಮ ಪತ್ರವನ್ನು ಸಲ್ಲಿಸುತ್ತೇನೆ ಎಂದು ಕವಿರಾಜ ಅರಸ ತಿಳಿಸಿದರು.


Body:ವಿಜಯ ನಗರದಲ್ಲಿ ಇಂದು ಆರೋಗ್ಯ ಸಚಿವ ಶ್ರೀ ರಾಮುಲು ಬಂಡಾಯದ ಅಭ್ಯರ್ಥಿ ಕವಿರಾಜ ಅರಸ್ ಅವರ ಮನೋವಲಿಸುವಲ್ಲಿ ವಿಫಲರಾಗಿದ್ದಾರೆ. ಅವರನ್ನು ಸಚಿವರು ಸುಮಾರು ಒಂದು ಘಂಟೆಯ ಕಾಲ ಮನೋವಲಿಸುವಲ್ಲಿ ವಿಫಲರಾಗಿದ್ದು ಬಂದ ದಾರಿಗೆ ಸುಂಕವಿಲ್ಲ ಎಂದು ಹೆಜ್ಜೆ ಕಿತ್ತಿದರು.
ವಿಜಯ ನಗದ ಕ್ಷೇತ್ರದಲ್ಲಿ ಉಪಚುನಾವಣೆಯು ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಕವಿರಾಜ ಅರಸ್ ಅವರನ್ನು ಮನೋವಲಿಸುವಲ್ಲಿ ಸಚಿವರು ಸೋಲು ಕಾಣುತ್ತಿದ್ದಾರೆ. ಅವರು ಯಾರು ಮಾತಿಗೆ ತಲೆ ಕೆಡಿಸಿಕೊಳ್ಳದೆ ಚುನಾವಣೆಗೆ ಸ್ಪರ್ಧೆಯನ್ನು ಮಾಡುತ್ತೇನೆ ಎಂದು ಖಡಕ್ ಆಗಿ ಹೇಳಿದರು.



Conclusion:KN_HPT_2_BABDAYA_ CANDIDATE_KAVIRAJ_SCRIPT_KA10028
BITE : 1) ಕವಿರಾಜ ಅರಸ್ ಬಿಜೆಪಿ ಬಂಡಾಯ ಅಭ್ಯರ್ಥಿ
:2) ಆರೋಗ್ಯ ಸಚಿವ ಬಿ.ಶ್ರೀರಾಮುಲು

ABOUT THE AUTHOR

...view details