ಕರ್ನಾಟಕ

karnataka

ಬೆಳಗಾವಿ: ಕೊರೆವ ಚಳಿಯಲ್ಲಿ ನಡು ಬೀದಿಯಲ್ಲಿ ಮಲಗಿದ ನೆರೆ ಸಂತ್ರಸ್ತರು..

By

Published : Jul 27, 2021, 10:01 AM IST

Updated : Jul 27, 2021, 10:20 AM IST

people are struggling due to flood in chikkodi
ಕೊರೆಯುವ ಚಳಿಯಲ್ಲಿ ನಡು ಬೀದಿಯಲ್ಲಿ ಮಲಗಿದ ನೆರೆ ಸಂತ್ರಸ್ತರು..

ಅಪಾರ ಪ್ರಮಾಣದಲ್ಲಿ ನೀರಿನ ಹರಿವು(ಕೃಷ್ಣ ನದಿ) ಹೆಚ್ಚಾಗಿದ್ದರಿಂದ ಮನೆಗಳಿಗೆ ಹಾಗೂ ಗುಡಿಸಲುಗಳಿಗೆ ನೀರು ಬಂದಿದ್ದು, ರಾತ್ರೋ ರಾತ್ರಿ ಜನರು ಮನೆ ಖಾಲಿ ಮಾಡಿದರು. ಚಿಂಚಲಿ ಪಟ್ಟಣದ ಹತ್ತಾರು ಕುಟುಂಬಗಳು ಕೊರೆಯುವ ಚಳಿಯಲ್ಲಿ ರಸ್ತೆಯ ಮೇಲೆ ಮಲಗಿರುವ ದೃಶ್ಯಗಳು ಕಂಡು ಬಂದಿದೆ.

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಹಾಗೂ ಕೃಷ್ಣಾ ನದಿ ತೀರದಲ್ಲಿ ಸಾಕಷ್ಟು ಮಳೆಯಾದ ಪರಿಣಾಮ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಕೃಷ್ಣಾ ನದಿ ತೀರದ ಗ್ರಾಮಗಳ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ತರನ್ನು ಭೇಟಿ ಮಾಡಿದ ಹಂಗಾಮಿ ಸಿಎಂ ಯಡಿಯೂರಪ್ಪ, ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ ಸಾಕಷ್ಟು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ಸಂತ್ರಸ್ತರನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತಕ್ಕೆ ಶಬ್ಬಾಷ್ ಗಿರಿ‌ ನೀಡಿ ಹೋದರು. ಆದರೆ, ರಾಯಭಾಗದ ನೂರಾರು ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಿಲ್ಲದೇ ಮಳೆಯ ನಡುವೆ ರಸ್ತೆಗಳ ಮೇಲೆ ಸಂತ್ರಸ್ತರು ರಾತ್ರಿಯಿಡಿ ಚಳಿಯಲ್ಲಿ ವಾಸವಾಗಿದ್ದಾರೆ.

ರಸ್ತೆಯ ಮೇಲೆ ಮಲಗಿದ ಜನ:

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದ ಬಳಿ ರಾತ್ರಿ ಸಮಯದಲ್ಲಿ ಅಪಾರ ಪ್ರಮಾಣದಲ್ಲಿ ನೀರಿನ ಹರಿವು(ಕೃಷ್ಣ ನದಿ) ಹೆಚ್ಚಾಗಿದ್ದರಿಂದ ಮನೆಗಳಿಗೆ ಹಾಗೂ ಗುಡಿಸಲುಗಳಿಗೆ ನೀರು ಬಂದಿದ್ದು, ರಾತ್ರೋರಾತ್ರಿ ಮನೆ ಖಾಲಿ ಮಾಡಿದರು. ಚಿಂಚಲಿ ಪಟ್ಟಣದ ಹತ್ತಾರು ಕುಟುಂಬಗಳು ಕೊರೆಯುವ ಚಳಿಯಲ್ಲಿ ರಸ್ತೆಯ ಮೇಲೆ ಮಲಗಿರುವ ದೃಶ್ಯಗಳು ಕಂಡು ಬಂದಿದೆ.

'ಸರ್ಕಾರದಿಂದ ಪರಿಹಾರವೇ ಬಂದಿಲ್ಲ'

ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದರೂ ತಾಲೂಕು ಆಡಳಿತ ಮಾತ್ರ ಒಂದೆ ಒಂದು ಕಾಳಜಿ ಕೆಂದ್ರವನ್ನು ಪ್ರಾರಂಭ ಮಾಡಿಲ್ಲ. ಈ ಬಗ್ಗೆ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯತಿಯವರು ನೆರೆ ಸಂತ್ರಸ್ತರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ತಮ್ಮ ಅಳಲು ತೊಡಿಕೊಂಡರು.

ಇದನ್ನೂ ಓದಿ:ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ತುಂಗಭದ್ರಾ ಡ್ಯಾಂ - ವಿಡಿಯೋ

ಮಳೆ ಹಾಗೂ ನದಿಯ ನೀರು ಮನೆಗಳಿಗೆ ನುಗ್ಗಿರುವುದರಿಂದ, ತಮ್ಮ ಗ್ರಾಮಗಳನ್ನು ತಮ್ಮ ದನಕರುಗಳ ಸಹಿತ ಖಾಲಿ ಮಾಡಿ ಕಾಳಜಿ ಕೇಂದ್ರಗಳನ್ನ ಅರಸುತ್ತಾ ಸುಸ್ತಾಗಿ ಸಿಕ್ಕ ಸಿಕ್ಕ ರಸ್ತೆಯ ಮೇಲೆ ವಾಸವಾಗುವ ಪರಿಸ್ಥಿತಿ ನಿಮಾರ್ಣವಾಗಿದೆ. ಇವರ ಸಂಕಷ್ಟಗಳನ್ನು ನೋಡಿ ಕೆಲ ಸ್ಥಳೀಯರು ಸಂತ್ರಸ್ತರಿಗೆ ಹಣದ ಮತ್ತು ಊಟದ ಸಾಹಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

Last Updated :Jul 27, 2021, 10:20 AM IST

ABOUT THE AUTHOR

...view details