ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರ ಹಿಡಿದು ಬಡಿದಾಡಿಕೊಂಡ ಎರಡು ಯುವಕರ ಗುಂಪುಗಳ ವಿರುದ್ಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ರಾತ್ರಿ ಮಾಗಡಿ ರಸ್ತೆಯ ರಹೇಜಾ ಅಪಾರ್ಟ್ಮೆಂಟ್ ಸಮೀಪದ ರಾಯಲ್ ಬಾರ್ ಸಮೀಪದಲ್ಲಿ ಗುರಾಯಿಸಿದರು ಎಂಬ ಕಾರಣಕ್ಕೆ ಕಬ್ಬಿಣದ ರಾಡ್, ಚಾಕು ಹಿಡಿದು ಯುವಕರು ಪರಸ್ಪರ ಬಡಿದಾಡಿಕೊಂಡಿದೆ.
ಪರಿಣಾಮ ಪ್ರಜ್ವಲ್ ಎಂಬಾತನ ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ರೆ ಪ್ರಶಾಂತ್, ಪ್ರವೀಣ್ ಹಾಗೂ ಚಂದ್ರು ಎಂಬ ಯುವಕರು ಪೊಲೀಸರ ಅತಿಥಿಗಳಾಗಿದ್ದಾರೆ.
ದೊಡ್ಡಬಳ್ಳಾಪುರ, ಮಾಗಡಿ ರೋಡ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಜ್ವಲ್ ಗುರುವಾರ ರಾತ್ರಿ 8:30ರ ಸುಮಾರಿಗೆ ಅಗ್ರಹಾರ ದಾಸರಹಳ್ಳಿ ಬಳಿ ಎದುರಾಳಿ ಪ್ರವೀಣನನ್ನ ನೋಡಿದ್ದಾನೆ. ಹೇಳಿ ಕೇಳಿ ಪ್ರವೀಣ ಅಗ್ರಹಾರ ದಾಸರಹಳ್ಳಿಯಲ್ಲಿ ರೌಡಿಸಂ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದವನು.