ಕರ್ನಾಟಕ

karnataka

ಮೋದಿ ರೋಡ್ ಶೋ ಎಫೆಕ್ಟ್: ರಸ್ತೆ ಬಂದ್​ನಿಂದಾಗಿ ಹೈರಾಣಾದ ಸಾರ್ವಜನಿಕರು

By

Published : Apr 29, 2023, 5:45 PM IST

Updated : Apr 29, 2023, 5:56 PM IST

ಇಂದು ಸಂಜೆ 6 ಗಂಟೆಯಿಂದ ಪ್ರಧಾನಿ ಮೋದಿ ರಾಜ್ಯ ರಾಜಧಾನಿಯಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ರೋಡ್​ ಶೋ ನಡೆಸಲಿದ್ದಾರೆ.

Locals are outraged against the road closure
ರಸ್ತೆ ಬಂದ್​ ವಿರುದ್ಧ ಸ್ಥಳೀಯರು ಆಕ್ರೋಶ

ರಸ್ತೆ ಬಂದ್​ ವಿರುದ್ಧ ಸ್ಥಳೀಯರು ಆಕ್ರೋಶ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮೋಡಿ ಮಾಡಲು ಮೋದಿ ಆಗಮಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾದರೆ ಮೋದಿ ಭದ್ರತೆಯಿಂದಾಗಿ ಸಂಚಾರ ಸಮಸ್ಯೆಗೆ ಸಿಲುಕಿ ಜನರು ಹೈರಾಣಾಗಿ ಪೊಲೀಸರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮೋದಿ ವಿರುದ್ಧವೂ ಕಿಡಿ ಕಾರುತ್ತಿರುವ ಘಟನೆ ರೋಡ್ ಶೋ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿ ಕಂಡುಬಂದಿದೆ.

ನಗರದ ತುಮಕೂರು ರಸ್ತೆಯಲ್ಲಿರುವ ನೈಸ್ ಜಂಕ್ಷನ್​ನಿಂದ ಹೊರವರ್ತುಲ ರಸ್ತೆಯಲ್ಲಿರುವ ಸುಮನಹಳ್ಳಿ ಸರ್ಕಲ್​ವರೆಗೂ ಇಂದು ಸಂಜೆ 6.15 ರಿಂದ 7 ಗಂಟೆವರೆಗೂ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ರೋಡ್ ಶೋ ಭದ್ರತೆಗಾಗಿ ಕಳೆದ ದಿನವೇ ಎಸ್.ಪಿ.ಜಿ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ರೋಡ್ ಶೋಗೆ ಗ್ರೀನ್ ಸಿಗ್ನಲ್ ನೀಡಿ ಭದ್ರತಾ ವ್ಯವಸ್ಥೆಗೆ ಪೊಲೀಸ್ ಇಲಾಖೆಗೆ ಕೆಲವೊಂದು ಸಲಹೆ ಸೂಚನೆ ಕೊಟ್ಟಿದೆ. ಹೀಗಾಗಿ ಪೊಲೀಸರು ಬೆಳಗ್ಗೆಯಿಂದಲೇ ರೋಡ್ ಶೋ ನಡೆಯುವ ಮಾರ್ಗದಲ್ಲಿ ಭದ್ರತೆ ಕಲ್ಪಿಸಿದ್ದು, ಸಂಚಾರ ವ್ಯವಸ್ಥೆಯನ್ನು ಹಂತ ಹಂತವಾಗಿ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ಇದರಿಂದಾಗಿ ಸ್ಥಳೀಯರ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ಜನರು ಹೈರಾಣಾಗಿದ್ದಾರೆ.

ನೈಸ್ ರೋಡ್​ನಿಂದ ಸುಮನಹಳ್ಳಿಯವರೆಗೂ ರೋಡ್ ಬ್ಲಾಕ್ ಮಾಡಿದ್ದರಿಂದ ತಮ್ಮ ತಮ್ಮ ಮನೆಗೆ ತೆರಳಲು ಸಾರ್ವಜನಿಕರು ಪರದಾಡಬೇಕಾಯಿತು. ಬಸ್​ಗಳು ದೂರದ ಸ್ಥಳದಲ್ಲೇ ನಿಲ್ಲುತ್ತಿದ್ದು, ಆಟೋಗಳ ಸಂಚಾರಕ್ಕೂ ಅವಕಾಶ ನಿರ್ಬಂಧಿಸಲಾಗಿದೆ. ಹೀಗಾಗಿ ಪ್ರಯಾಣಿಕರು ಕಾಲ್ನಡಿಗೆಯಲ್ಲೇ ಸಂಚರಿಸಬೇಕಿದೆ. ದ್ವಿಚಕ್ರ ವಾಹನಗಳಿಗೂ ನೋ ಎಂಟ್ರಿ ಎನ್ನಲಾಗುತ್ತಿದೆ. ಹೀಗಾಗಿ ಮೋದಿ ರೋಡ್ ಶೋ ನಡೆಯುವ ಮಾರ್ಗದ ವ್ಯಾಪ್ತಿಯಲ್ಲಿನ ಸುತ್ತಮುತ್ತಲ ಪ್ರದೇಶಕ್ಕೆ ತೆರಳಲು ಜನರು ಪ್ರಯಾಸ ಪಡಬೇಕಾಗಿದ್ದು, ಪೊಲೀಸರಿಗೆ ಹಾಗೂ ಮೋದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮೋದಿ ರೋಡ್ ಶೋ ಇದೆ, ಅದಕ್ಕೆ ಸಮಯವೂ ನಿಗದಿಯಾಗಿದೆ. ಆ ಸಮಯ ನೋಡಿ ನಿಗದಿತ ಕಾಲಮಿತಿಯಲ್ಲಿ ರೋಡ್​ಗಳಲ್ಲಿ ಸಂಚಾರ ನಿರ್ಬಂಧಿಸಬಹುದಿತ್ತು. ಅದನ್ನು ಬಿಟ್ಟು ಇಡೀ ದಿನ ಸಂಚಾರ ನಿರ್ಬಂಧಿಸಿದರೆ ಹೇಗೆ? ದೂರದಿಂದ ನಡೆದು ಬರಲು ಎಲ್ಲರಿಗೂ ಸಾಧ್ಯವಾಗುತ್ತಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಬಿಜೆಪಿ ಕಾರ್ಯಕರ್ತರು ಹಾಗು ಮೋದಿ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿಯಾಗಿದ್ದು, ಮೋದಿ ನೋಡಲು ಕಾತರದಿಂದ ಕಾಯುತ್ತಿದ್ದರೆ, ಸ್ಥಳೀಯರು ಮಾತ್ರ ಮೋದಿ ಯಾಕಾದರೂ ರೋಡ್ ಶೋ ನಡೆಸಲು ಬರುತ್ತಿದ್ದಾರೋ ಎಂದು ಶಪಿಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮದುಮಗನಿಗೂ ತಟ್ಟಿದ ಪ್ರಧಾನಿ ಮೋದಿ ಭದ್ರತೆ ಬಿಸಿ!

Last Updated : Apr 29, 2023, 5:56 PM IST

ABOUT THE AUTHOR

...view details