ಕರ್ನಾಟಕ

karnataka

ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಲಿ: ಹೆಚ್​​ಡಿಕೆ

By

Published : Feb 6, 2023, 9:04 AM IST

Updated : Feb 6, 2023, 9:22 AM IST

ಕೇಂದ್ರ ಸಚಿವ ಜೋಶಿ ವಿರುದ್ಧದ ಹೇಳಿಕೆಗೆ ಬಿಜೆಪಿ ನಾಯಕರಿಂದ ವಾಗ್ದಾಳಿ - ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಲಿ- ಹೆಚ್​ ಡಿ ಕುಮಾರಸ್ವಾಮಿ ತಿರುಗೇಟು

Former CM HD Kumaraswamy
ದಾಸರಹಳ್ಳಿಯಲ್ಲಿ ಜೆಡಿಎಸ್​​ ಪಂಚರತ್ನ ಯಾತ್ರೆ

ದಾಸರಹಳ್ಳಿಯಲ್ಲಿ ಜೆಡಿಎಸ್​​ ಪಂಚರತ್ನ ಯಾತ್ರೆ...

ಬೆಂಗಳೂರು: ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಸಿಡಿಯಲ್ಲಿ ಅವರು ಎಕ್ಸ್‌ಪರ್ಟ್ಸ್ ಇದ್ದಾರೆ. ಅದನ್ನ ತೋರಿಸಿಕೊಂಡು ಓಡಾಡಿ. ಮುನಿರತ್ನ ಇದ್ದಾರಲ್ಲ, ಅವರಿಗೆ ಹೇಳಿ ಒಂದು ಸ್ಕ್ರೀನ್ ರೆಡಿ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಟೀಕಿಸುತ್ತ ಜೋಶಿಯವರ ಬ್ರಾಹ್ಮತ್ವದ ವಿರುದ್ಧ ಹೇಳಿಕೆಯನ್ನು ಹೆಚ್​ ಡಿಕೆ ನೀಡಿದ್ದರು. ಇದನ್ನು ಖಂಡಿಸಿದ್ದ ಬಿಜೆಪಿ ವಕ್ತಾರ ಎನ್.ರವಿಕುಮಾರ್, 'ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಅಲ್ಲ. ಅವರ ಬಗ್ಗೆ ಸಿಡಿ, ತಾಜ್ ವೆಸ್ಟೆಂಡ್ ಹೋಟೆಲ್, ಅವರ ಮನೆ, ಅವರ ತೋಟದ ಮನೆ ಇವೆಲ್ಲ ಪ್ರಕರಣಗಳು ನನಗೆ ಗೊತ್ತಿವೆ. ಅವರು ಇದೇ ರೀತಿ ಮಾತನಾಡುತ್ತಿದ್ದರೆ ನಾವು ಕೂಡ ರಾಜಕಾರಣ ಮಾಡಲು ಬಂದವರು ಎಂಬುದನ್ನು ತಿಳಿದುಕೊಳ್ಳಲಿ' ಎಂದು ಸವಾಲೆಸೆದಿದ್ದರು.

ಇದನ್ನೂ ಓದಿ:ಹೆಚ್ಡಿಕೆ ಸತ್ಯ ಹರಿಶ್ಚಂದ್ರ ಅಲ್ಲ,ಇದೇ ರೀತಿ ಮಾತನಾಡಿದರೆ ವೆಸ್ಟ್ ಎಂಡ್ ಬಗ್ಗೆ ಮಾತನಾಡಬೇಕಾಗುತ್ತೆ: ರವಿಕುಮಾರ್

ಬಿಜೆಪಿ, ಕಾಂಗ್ರೆಸ್​​ ನಾಯಕರಿಂದ ಖಂಡನೆ:ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ದಾಸರಹಳ್ಳಿ ಪಂಚರತ್ನ ಯಾತ್ರೆ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬ್ರಾಹ್ಮಣ ವಿರುದ್ಧದ ಹೇಳಿಕೆಗೆ ಬಿಜೆಪಿ ನಾಯಕರು ಹೆಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಹೆಚ್​ಡಿಕೆ ಹೇಳಿಕೆಯನ್ನು ಖಂಡಿಸಿದ್ದರು.

ಹೆಚ್​​ಡಿಕೆ ಹೇಳಿದ್ದೇನು?:ಕುಮಾರಸ್ವಾಮಿ ದಾಸರಹಳ್ಳಿ ಕ್ಷೇತ್ರದಲ್ಲಿನ ಪಂಚರತ್ನ ಯಾತ್ರೆ ವೇಳೆ ಮಾತನಾಡುತ್ತ, 'ಪ್ರಹ್ಲಾದ್ ಜೋಶಿಯವರನ್ನು ಮುಂದಿನ ಸಿಎಂ ಮಾಡಲು ಆರ್​​ಎಸ್ಎಸ್ ನಿರ್ಧಾರ ಮಾಡಿದೆ. ಜೋಶಿಯವರನ್ನ ಸಿಎಂ ಮಾಡಿ, 8 ಮಂದಿ ಉಪ ಮುಖ್ಯಮಂತ್ರಿ ಮಾಡುವ ಪ್ಲಾನ್ ಆರ್​​ಎಸ್​​ಎಸ್ ದೆಹಲಿ ಕಚೇರಿಯಲ್ಲಿ ಚರ್ಚೆ ನಡೆದಿದೆ. ಹೀಗಾಗಿ ನಿನ್ನೆಯಿಂದ ನಮ್ಮ ಮೇಲೆ ಗಧಾ ಪ್ರಹಾರ ಶುರು ಮಾಡಿದ್ದಾರೆ. ಅವರು ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ. ನಮ್ಮ ಭಾಗದ ಹಳೆ ಮೈಸೂರು ಭಾಗದ ಬ್ರಾಹ್ಮಣ ವರ್ಗಕ್ಕೆ ಸೇರಿದವರಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ಜೆಡಿಎಸ್‌ ಪಂಚರತ್ನ ಯಾತ್ರೆಯಲ್ಲ, ಕುಟುಂಬದ ನವಗ್ರಹ ಯಾತ್ರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ನಮ್ಮ ಹಳೆ ಮೈಸೂರು ಭಾಗದ ಬ್ರಾಹ್ಮಣರು 'ಸರ್ವೇ ಜನಾಃ ಸುಖಿನೋ ಭವಂತು' ಎನ್ನುವವರು. ಆದರೆ ಜೋಶಿಯವರು ಮಹಾರಾಷ್ಟ್ರದ ಪೇಶ್ವೆ ವಂಶಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ. ಅವರಿಗೆ ದೇಶ ಒಡೆಯುವಂತದ್ದು, ಕುತಂತ್ರ ರಾಜಕಾರಣ ಮಾಡುವಂತದ್ದು, ದೇಶಭಕ್ತಿಯ ಹೆಸರಲ್ಲಿ ದೇಶಕ್ಕೆ ಕೊಡುಗೆ ಕೊಟ್ಟಂತವರನ್ನು ಮಾರಣಹೋಮ ಮಾಡುವಂತದ್ದು ಈ ವರ್ಗದವರಿಂದ ಬಂದವರ ಕೃತ್ಯ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:ಪ್ರಹ್ಲಾದ್ ಜೋಶಿ ನಮ್ಮ ಬ್ರಾಹ್ಮಣರಲ್ಲ, ಅವರನ್ನು ಮುಂದಿನ‌ ಸಿಎಂ ಮಾಡಲು ಆರ್​ಎಸ್ಎಸ್ ನಿರ್ಧರಿಸಿದೆ: ಹೆಚ್​ಡಿಕೆ

ಹೆಚ್​​ಡಿಕೆಗೆ ಅದ್ಧೂರಿ ಸ್ವಾಗತ:ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ ನೇತೃತ್ವದ ಪಂಚರತ್ನ ಯಾತ್ರೆ ಭಾನುವಾರ ದಾಸರಹಳ್ಳಿ ಕ್ಷೇತ್ರದಲ್ಲಿ ನಡೆಯಿತು. ತರಹವೇರಿ ಹಾರಗಳನ್ನು ಹಾಕಿ ಕುಮಾರಸ್ವಾಮಿರನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಯಿತು. ದಾಸರಹಳ್ಳಿ ಕ್ಷೇತ್ರದ ಲಕ್ಷ್ಮೀಪುರದಲ್ಲಿ ದವಸ ಧಾನ್ಯ ಹಾರ, ಚಿಕ್ಕ ಬಾಣವಾರದಲ್ಲಿ ಅರಿಶಿಣ ಕುಂಕುಮ ಹಾರ, ಚಿಕ್ಕಸಂದ್ರದಲ್ಲಿ ಸ್ಪೋರ್ಟ್ಸ್ ಬಾಲ್ ಹಾರ, ಚೊಕ್ಕಸಂದ್ರದಲ್ಲಿ ಹಣ್ಣಿನ ಹಾರ, ದಾಸರಹಳ್ಳಿಯಲ್ಲಿ ಮೆಟ್ರೋ ಹಾರ, ಹೆಗ್ಗನಹಳ್ಳಿ- ಸಪೊಟಾ ಹಾರ, ಸುಂಕದ ಕಟ್ಟೆಯಲ್ಲಿ ಪಂಚರತ್ನ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಲಾಯಿತು. ಜತೆಗೆ ಗ್ರೀನ್ ಆ್ಯಪಲ್, ರೆಡ್ ಆ್ಯಪಲ್ ಹಾಗೂ ಕಿತ್ತಳೆ ಹಣ್ಣಿನ ಹಾರ, ಸೇಬಿನ ಹಾರ ಹಾಕಿ ಸ್ವಾಗತಿಸಿದರು.

ಇತ್ತ ಮೋನ್ ಮಿಲ್ ಕಾರ್ಯಕರ್ತರು ಜೆಡಿಎಸ್ ಪಕ್ಷದ ಚಿನ್ನೆ ಪದಕ ಇರುವ ಬೆಳ್ಳಿಯ ಹಾರ‌ ನೀಡಲು ಮುಂದಾದರು. ಬೆಳ್ಳಿಯ ಹಾರವನ್ನ ಹಾಕಿಸಿಕೊಳ್ಳದ ಹೆಚ್​​ಡಿಕೆ, ಇದನ್ನ ನಾನು ಗೌರವಿಸುತ್ತೇನೆ. ನಾನು ನಂಬಿರುವ ಶಿವನ ದೇವಸ್ಥಾನಕ್ಕೆ ನೀಡುವುದಾಗಿ ಹೇಳಿದರು. ಮತ್ತೊಂದೆಡೆ ಬಾಗಲಗುಂಟೆಯಲ್ಲಿ ಅಭಿಮಾನಿಗಳು ಕುರಿ ನೀಡಿ ಸ್ವಾಗತಿಸಿದರು. ಕುರಿ ಮೇಲೆ ಹೆಚ್​ಡಿಕೆ ಎಂದು ಬರೆಯಲಾಗಿತ್ತು.

65 ವರ್ಷ ಮೇಲ್ಪಟ್ಟವರಿಗೆ 5 ಸಾವಿರ:ಯಾತ್ರೆ ವೇಳೆ ಮಾತನಾಡಿದ ಕುಮಾರಸ್ವಾಮಿ, ಸ್ಪಷ್ಟ ಬಹುಮತ ನೀಡಿದರೆ ಪಂಚರತ್ನ ಯೋಜನೆ ಸಂಪೂರ್ಣ ಜಾರಿಗೆ ತರುತ್ತೇವೆ. 65 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 5 ಸಾವಿರ ಕೊಡುತ್ತೇವೆ. ಮದುವೆಯಾಗದ ಮಹಿಳೆಗೆ ಮಾಸಿಕ 2 ಸಾವಿರ ಮಾಶಾಸನ ನೀಡುತ್ತೇವೆ. ಆರ್.ಅಶೋಕ್ ಅವರಿಗೆ ಆಶೀರ್ವಾದ ಮಾಡಿದ್ದೀರಿ‌. ಬಿಜೆಪಿಗೂ ಆಶೀರ್ವಾದ ಮಾಡಿದ್ದೀರಿ. ಆದರೆ ಅವರು ಅಭಿವೃದ್ಧಿ ಬಿಟ್ಟು ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಬಾರಿ ಜನತಾದಳ ಸರ್ಕಾರ ಬರಲು ಆಶೀರ್ವಾದ ಮಾಡಿ. ಮಂಜಣ್ಣ ಅವರನ್ನ ಮಂತ್ರಿ ಮಾಡುತ್ತೇನೆ. ಮೇ ತಿಂಗಳ ಒಳಗಾಗಿ ನಿಮ್ಮ ದಾಸರಹಳ್ಳಿಯ ಪ್ರತೀ ರಸ್ತೆಗಳು ಸಿಸಿ ರಸ್ತೆಗಳಾಗಬೇಕು. ಮನೆ ಇಲ್ಲದವರಿಗೆ ಸ್ವಂತ ಮನೆ ಕೊಡ್ತೀವಿ. ಹೂ, ತರಕಾರಿ ಮಾರುವವರಿಗೆ ಸ್ವಂತ ಮನೆ ಕಟ್ಟಿ ಕೊಡ್ತೇನೆ. ಒಂದು ಅವಕಾಶವನ್ನ ನಮ್ಮ ಅಭ್ಯರ್ಥಿ ಹಾಗೂ ಪಕ್ಷಕ್ಕೆ ಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಇದನ್ನೂ ಓದಿ:ಜೆಡಿಎಸ್​ ಅಧಿಕಾರಕ್ಕೆ ಬಂದ್ರೆ ಹಿರಿಯ ನಾಗರಿಕರಿಗೆ 5000 ರೂ ಮಾಶಾಸನ, ಮಹಿಳಾ ಸಂಘಗಳ ಸಾಲಮನ್ನಾ: ಹೆಚ್​ಡಿಕೆ

Last Updated :Feb 6, 2023, 9:22 AM IST

ABOUT THE AUTHOR

...view details