ಸಿಡ್ನಿ(ಆಸ್ಟ್ರೇಲಿಯಾ):ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಏಕದಿನ ಪಂದ್ಯದಲ್ಲಿ ಭಾರತ ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ತಂಡಕ್ಕೆ ಆಟದ ತಯಾರಿಗಾಗಿ ಸಾಕಷ್ಟು ಸಮಯವಿತ್ತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಪಂದ್ಯಕ್ಕೆ ತಯಾರಾಗಲು ಸಾಕಷ್ಟು ಸಮಯ ಸಿಕ್ಕಿದೆ. ಸೋಲಿಗೆ ಯಾವುದೇ ನೆಪಗಳು ಇರಬಹುದೆಂದು ಭಾವಿಸಬೇಡಿ. ಬಹುಶಃ ಟಿ-20 ಕ್ರಿಕೆಟ್ ಪಂದ್ಯಗಳನ್ನಾಡಿದ್ದ ನಾವು, ಬಹು ಕಾಲದ ನಂತರ ಆಡಿದ ಸುದೀರ್ಘ ಆಟ ಇದಾಗಿದೆ. ಬಹುಶಃ ಅದು ಪರಿಣಾಮ ಬೀರುವಂತಹದ್ದು" ಎಂದು ವಿರಾಟ್ ಕಾರಣ ಕೊಟ್ಟಿದ್ದಾರೆ.
ಪಾಂಡ್ಯ, ಧವನ್ ಹೋರಾಟ ವ್ಯರ್ಥ.. ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಆಸೀಸ್
"25 ಓವರ್ಗಳ ನಂತರ ತಂಡದ ಬಾಡಿ ಲಾಂಗ್ವೇಜ್ ಉತ್ತಮವಾಗಿಲ್ಲ. ಗುಣಮಟ್ಟದ ಆಟಗಾರರು ನೀಡುವ ಅವಕಾಶವನ್ನು ಕೈ ಚೆಲ್ಲಿದ್ರೆ ಖಡಿತವಾಗಿಯೂ ಅದಕ್ಕೆ ಬೆಲೆ ಕಟ್ಟಬೇಕಾಗುತ್ತದೆ" ಎಂದು ಟೀಂ ಇಂಡಿಯಾದ ಕಳಪೆ ಕ್ಷೇತ್ರರಕ್ಷಣೆ ಬಗ್ಗೆ ಮಾತನಾಡಿದ್ದಾರೆ.