ಹೈದರಾಬಾದ್: ಕಾಂಟ್ರೊವರ್ಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಂಚಾರಿ ನಿಯಮ ಗಾಳಿಗೆ ತೂರಿ ಪೊಲೀಸರನ್ನು ಅಣಕಿಸಿದ್ದಕ್ಕೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
ಇತ್ತೀಚಿಗಷ್ಟೆ ಆರ್ಜಿವಿ, ನಿರ್ದೇಶಕರುಗಳಾದ ಅಜಯ್ ಭೂಪತಿ ಹಾಗೂ ಅಗಸ್ಥ್ಯ ಜತೆ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಥಿಯೇಟರ್ಗೆ ತೆರಳಿದ್ದರು. ಪುರಿ ಜಗನ್ನಾಥ್ ಅವರ 'ಇಸ್ಮಾರ್ಟ್ ಶಂಕರ್' ನೋಡಲು ಟ್ರಿಪಲ್ ರೈಡಿಂಗ್ ಮಾಡಿದ್ದ ಅವರು, ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಅಷ್ಟೇ ಅಲ್ಲದೆ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, 'ಪೊಲೀಸರು ಎಲ್ಲಿದ್ದಾರೆ? ಬಹುಶಃ ಅವರೆಲ್ಲ ಚಿತ್ರಮಂದಿರದಲ್ಲಿ ಕುಳಿತು ಇಸ್ಮಾರ್ಟ್ ಶಂಕರ್ ಸಿನಿಮಾ ನೋಡ್ತಿರಬಹುದು' ಎಂದು ಅಪಹಾಸ್ಯದ ರೀತಿ ಟ್ವೀಟ್ ಮಾಡಿದ್ದರು.