ಕರ್ನಾಟಕ

karnataka

ಶೌಚಾಲಯ ನಿರ್ಮಾಣ ವಿಚಾರವಾಗಿ ಘರ್ಷಣೆ : ಓರ್ವನ ಕೊಲೆ

By

Published : May 7, 2021, 9:25 PM IST

Updated : May 7, 2021, 10:24 PM IST

ಸ್ಥಳಕ್ಕೆ ಸಿಪಿಐ ಅಯ್ಯನಗೌಡ ಪಾಟೀಲ್, ಪಿಎಸ್ಐ ಎಸ್.ಆರ್.ನಾಯಕ್ ಭೇಟಿ ಪರಿಶೀಲನೆ ನಡೆಸಿದ್ದು, ಹುನಗುಂದ ಪೊಲೀಸ್​​​​ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ..

one-murdered-in-an-conflict-between-two-families
ಶೌಚಾಲಯ ನಿರ್ಮಾಣ ವಿಚಾರವಾಗಿ ಘರ್ಷಣೆ: ಓರ್ವನ ಕೊಲೆ

ಬಾಗಲಕೋಟೆ : ಶೌಚಾಲಯ ಕಟ್ಟುವ ವಿಷಯವಾಗಿ ಎರಡು ಕುಟುಂಬಗಳ ಮಧ್ಯೆ ಉಂಟಾದ ಘರ್ಷಣೆ, ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕ ಬಾದವಾಡಗಿ ಗ್ರಾಮದಲ್ಲಿ ನಡೆದಿದೆ.

ಯಲ್ಲನಗೌಡ ಗೌಡರ (35) ಎಂಬಾತನೇ ವ್ಯಕ್ತಿ ಮೃತ ವ್ಯಕ್ತಿ. ಶಂಕರಗೌಡ, ಸಕ್ಕೂಬಾಯಿ ಎಂಬುವರು ಸೇರಿದಂತೆ ನಾಲ್ವರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘರ್ಷಣೆಯ ದೃಶ್ಯ

ಮಹಾದೇವಪ್ಪ ವಂದಾಲಿ ಎಂಬುವರು ತಮ್ಮ ಮನೆ ಹತ್ತಿರ ಶೌಚಾಲಯ ನಿರ್ಮಿಸುತ್ತಿದ್ದರು. ಇದರಿಂದ ಮಹಾದೇವಪ್ಪ ವಂದಾಲಿ ಮತ್ತು ಯಲ್ಲನಗೌಡ ಗೌಡರ ಎಂಬುವರ ಕುಟುಂಬಸ್ಥರ ಮಧ್ಯೆ ಆರಂಭವಾದ ಮಾತಿನ ಘರ್ಷಣೆ ನಡೆದಿದೆ. ಎರಡೂ ಕುಟುಂಬದವರು ಪರಸ್ಪರ ಬಡಿಗೆಯಿಂದ ಹೊಡೆದಾಡಿಕೊಂಡಿದ್ದಾರೆ.

ಇದನ್ನೂ ಓದಿ:ಕಾರಿನಲ್ಲಿ ಉಸಿರುಗಟ್ಟಿ 4 ಮಕ್ಕಳು ಸಾವು.. ಒಂದು ಮಗುವನ್ನು ರಕ್ಷಿಸಿದ ಪೊಲೀಸರು

ಈ ವೇಳೆ ಓರ್ವ ಮೃತಪಟ್ಟಿದ್ದು, ಘಟನೆ ಸಂಬಂಧ ಒಟ್ಟು 42 ಮಂದಿಯ ವಿರುದ್ಧ ದೂರು ದಾಖಲಾಗಿದ್ದು, ಸದ್ಯಕ್ಕೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.

ಸ್ಥಳಕ್ಕೆ ಸಿಪಿಐ ಅಯ್ಯನಗೌಡ ಪಾಟೀಲ್, ಪಿಎಸ್ಐ ಎಸ್.ಆರ್.ನಾಯಕ್ ಭೇಟಿ ಪರಿಶೀಲನೆ ನಡೆಸಿದ್ದು, ಹುನಗುಂದ ಪೊಲೀಸ್​​​​ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.

Last Updated :May 7, 2021, 10:24 PM IST

ABOUT THE AUTHOR

...view details