ETV Bharat / state

ನೀರಾವರಿ ಇಲಾಖೆಯ ಇಂಜಿನಿಯರ್​​​​ ಮಗನ ಮದುವೆಯಲ್ಲಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

author img

By ETV Bharat Karnataka Team

Published : Mar 7, 2024, 2:46 PM IST

ಮದುವೆಯಲ್ಲಿ ಕಳ್ಳತನ
ಮದುವೆಯಲ್ಲಿ ಕಳ್ಳತನ

ಧಾರವಾಡದ ಓಶಿಯನ್​​ ಪರ್ಲ್​ ಹೋಟೆಲ್​ನಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಕಳ್ಳತನ ನಡೆದಿದೆ.

ಧಾರವಾಡ: ಮದುವೆ ಸಂಭ್ರಮದ ಮಧ್ಯೆ ಧಾರವಾಡದಲ್ಲಿ ಭಾರಿ ಕಳ್ಳತನ ನಡೆದಿದೆ. ಹೊರವಲಯದ ಸ್ಟಾರ್​​​ ಹೊಟೇಲ್​ನಲ್ಲಿ ನೀರಾವರಿ ಇಲಾಖೆ ಇಂಜಿನಿಯರ್​ ಮಗನ ಮದುವೆಯಲ್ಲಿ ಕಳ್ಳತನವಾಗಿದೆ. 800ಗ್ರಾಂ ಚಿನ್ನ, ವಜ್ರದ 2 ಉಂಗುರ, 60 ಲಕ್ಷ ರೂ. ನಗದು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ‌.

ಗಂಗಾಧರಪ್ಪ ಪಟ್ಟಣಶಟ್ಟಿ ಎಂಬುವರ ಕುಟುಂಬದ ವಿವಾಹ ಕಾರ್ಯಕ್ರಮ ಓಶಿಯನ್​ ಪರ್ಲ್​ ಹೋಟೆಲ್​ನಲ್ಲಿತ್ತು. ಆ ಮದುವೆ ಕಾರ್ಯಕ್ರಮದಲ್ಲಿ ಕಳ್ಳತನ ಮಾಡಿ ಪರಾರಿಯಾಗುವ ಕಳ್ಳರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿನ್ನಾಭರಣ ಹಣ ಇರುವುದನ್ನು ಗಮನಿಸಿ ಬ್ಯಾಗ್​​ ಕದ್ದಿರುವ ಕಳ್ಳರ ಪೈಕಿ ಒಬ್ಬ ಕಳ್ಳ ಬಾಲಕ ಎಂಬ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳನ ಪತ್ತೆಗೆ ಜಾಲ ಬೀಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಮೂವರ ಹಣ, ಚಿನ್ನಾಭರಣ ಕದ್ದೊಯ್ದ ಕಳ್ಳರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.