ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿದ ಬಂದ ಪ್ರಕರಣದ ರಾಜ್ಯ ಸರ್ಕಾರವೇ ಸುಮೋಟೊ ಕೇಸ್ ಯಾಕೆ ದಾಖಲಿಸಿಲ್ಲ?. ಕಾಂಗ್ರೆಸ್ ಸರ್ಕಾರವಿದ್ದು, ಪೊಲೀಸ್ ಇಲಾಖೆಯೂ ನಿಮ್ಮ ಕೈಯಲ್ಲೇ ಇದೆಯಲ್ವಾ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.
ರಾಯಚೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆದಾಗ ತನಿಖೆ ಗೃಹ ಸಚಿವ ಪರಮೇಶ್ವರ್ ಅವರು ತಿಂಗಳು ಮೊದಲೇ ಇದರ ಬಗ್ಗೆ ನಮ್ಮ ಗಮನಕ್ಕೆ ಬಂದಿತ್ತು ಎಂದು ಹೇಳಿಕೆ ನೀಡಿದ್ದಾರೆ. ಆಗಲೇ ಸುಮೋಟೊ, ಎಫ್ಐಆರ್ ಮಾಡಬೇಕಿತ್ತಲ್ವಾ?. ರೇವಣ್ಣ ಹಾಸನದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ಏರಿದ್ದಾರೆ. ಇದರ ಮಾರ್ಗ ಮಧ್ಯೆ ಚೆಕ್ ಪೋಸ್ಟ್ ಹಾಕಿ ಅವರನ್ನು ತಡೆದಿಲ್ಲ. ಹಾಸನ ಪೊಲೀಸರು ಯಾಕೆ ಅವರ ಮನೆಗೆ ಹೋಗಿಲ್ಲ?. ಇದ್ಯಾವುದನ್ನೂ ನೀವು ಮಾಡಿಲ್ಲ. ಬೇಸಿಕ್ ಹೋಂ ವರ್ಕ್ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಂದುವರೆದು, ಮೊದಲ ಸಂತ್ರಸ್ತೆ ಪೊಲೀಸ್ ಠಾಣೆಗೆ ಬರುವವರೆಗೂ ಈ ಸರ್ಕಾರ ಕಾದಿತ್ತು. ಸಂತ್ರಸ್ತೆ ದೂರು ಕೊಟ್ಟ ನಂತರ ಎಫ್ಐಆರ್ ಮಾಡಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳಾಗಿದೆ. ಗುಪ್ತಚರ ಇಲಾಖೆ ಏನು ಮಾಡುತ್ತಿದೆ?. ಕಾಂಗ್ರೆಸ್ನವರು 2000, 3000 ವಿಡಿಯೋ ಅಂತಾ ಇತ್ತು ಹೇಳುತ್ತಿದ್ದೀರಾ? ಎಂದು ಕಿಡಿಕಾರಿದರು.
ಪ್ರಜ್ವಲ್ ವಿದೇಶಕ್ಕೆ ಹೋಗಲು ಕೇಂದ್ರ ಸರ್ಕಾರ ಸಹಕಾರ ನೀಡಿದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ಎಲ್ಲ ಸಂಸದರಿಗೆ ರಾಜತಾಂತ್ರಿಕ ಪಾಸ್ ಕೊಡಲಾಗುತ್ತದೆ. ಡಿ.ಕೆ. ಶಿವಕುಮಾರ್ ತಮ್ಮ ಡಿ.ಕೆ.ಸುರೇಶ್ ಅವರಿಗೂ ಅದೇ ರೀತಿಯ ಪಾಸ್ ಪೋರ್ಟ್ ಇದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಈಗಾಗಲೇ ಸ್ಪಷ್ಟನೆ ನೀಡಿದೆ ಎಂದರು.
ಬಿಜೆಪಿಗೆ ಡ್ಯಾಮೇಜ್ ಆಗಲ್ಲ: ಇದೇ ವೇಳೆ, ಪ್ರಜ್ವಲ್ ರೇವಣ್ಣ ಪ್ರಕರಣದಿಂದ ನಮ್ಮ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ. ಜೆಡಿಎಸ್ ಬೇರೆ, ಬಿಜೆಪಿ ಬೇರೆ. ಹೆಚ್.ಡಿ. ದೇವೆಗೌಡರೇ ಖುದ್ದು ಮೋದಿಯವರು ಮತ್ತೆ ಪ್ರಧಾನಿ ಆಗಲಿ ಎಂದು ಪ್ರಚಾರ ಮಾಡುತ್ತಿದ್ದಾರೆ. 2019ಕ್ಕಿಂತ ಮೊದಲು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಇತ್ತು. ಇವತ್ತು ಇಲ್ಲ. ಹೀಗಾಗಿ ಕಾಂಗ್ರೆಸ್ನವರು ಉಲ್ಟಾ, ಪಲ್ಟಾ ಮಾತನಾಡುತ್ತಿದ್ದಾರೆ ಎಂದು ಅಣ್ಣಾಮಲೈ ತಿರುಗೇಟು ನೀಡಿದರು.
ಅಲ್ಲದೇ, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ಗೆ ಅಭ್ಯರ್ಥಿಗಳು. ಈ ಬಾರಿ ಅತಿಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಗೆಲುವು ಸಹ ಈ ಬಾರಿ 50ಕ್ಕಿಂತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ರಾಹುಲ್ ಗಾಂಧಿ ಅವರಿಗೆ ತಾವು ಮೂರು ಬಾರಿ ಗೆದ್ದ ಅಮೇಠಿಗೆ ಹೋಗಲು ಮನಸ್ಸಿಲ್ಲ. ಚುನಾವಣೆಯಲ್ಲಿ ಮಾತನಾಡಬೇಕು ಅಂತಾ ಮಾತನಾಡುತ್ತಿದ್ದಾರೆ. ಅವರು ಗಂಭೀರವಾಗಿಲ್ಲ ಅಂತಾ ಸ್ವತಃ ಕಾಂಗ್ರೆಸ್ಸಿನವರಿಗೇ ತೋರುತ್ತಿದೆ ಎಂದು ಅಣ್ಣಾಮಲೈ ವ್ಯಂಗ್ಯವಾಡಿದರು.
ಇದನ್ನೂ ಓದಿ: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಆಂತರಿಕ ಕಲಹದ ಮಾಹಿತಿ, ಹೆಚ್ಡಿಕೆ ನಿಲುವು ಬದಲಿಸಿದ್ಯಾಕೆ?: ಡಿಕೆಶಿ