ETV Bharat / state

ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿದ್ದೇನೆ-ಜನಾರ್ದನ ರೆಡ್ಡಿ; ಒಂದು ಅಡ್ಡ ಮತದಾನ ಆಗಿರಬಹುದೆಂದ ಯತ್ನಾಳ್

author img

By ETV Bharat Karnataka Team

Published : Feb 27, 2024, 3:30 PM IST

Updated : Feb 27, 2024, 4:10 PM IST

ಶಾಸಕ ಜನಾರ್ದನರೆಡ್ಡಿ,ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಶಾಸಕ ಜನಾರ್ದನರೆಡ್ಡಿ,ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಒಂದು ಅಡ್ಡ ಮತದಾನ ಆಗಿರಬಹುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಿಳಿಸಿದರೆ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಹಕ್ಕು ಚಲಾಯಿಸಿರುವುದಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.

ಶಾಸಕರಾದ ಜನಾರ್ದನ ರೆಡ್ಡಿ ಹಾಗು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ಬೆಂಗಳೂರು : ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿದ್ದೇನೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ವಿಧಾನಸೌಧದಲ್ಲಿ ಇಂದು ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೆ ಮತ ಹಾಕಿದ್ದೀರಾ? ಎಂಬ ಪ್ರಶ್ನೆಗೆ ಅದು ನನ್ನ ಆತ್ಮಕ್ಕೆ ಗೊತ್ತಿದೆ ಎಂದರು.

ಇದೇ ವೇಳೆ ಬಿಜೆಪಿಯಿಂದ ಅಡ್ಡ ಮತದಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಒಂದು ಅಡ್ಡ ಮತದಾನ ಆಗಿರಬಹುದು. ನಮ್ಮ ಎಲ್ಲಾ ಮತಗಳು ಈಗಾಗಲೇ ಚಲಾವಣೆ ಆಗಿವೆ. ಇನ್ನೆಲ್ಲಿ ಹೆಚ್ಚುವರಿ ಮತಗಳು ಹೋಗುತ್ತವೆ. ಕಾಂಗ್ರೆಸ್​ನವರೇ ಬಂದು ಬಿಜೆಪಿಗೆ ಹಾಕಬೇಕು ಅಷ್ಟೇ ಎಂದರು.

ಏಕೆ ಒಂದು ಮತ ಆ ಕಡೆ ಹೋಯ್ತು ಎಂಬ ಪ್ರಶ್ನೆಗೆ, ಶಾಸಕ ಎಸ್. ಟಿ ಸೋಮಶೇಖರ್ ಅಷ್ಟು ಅನುಭವಿ ರಾಜಕಾರಣಿ ಅಲ್ಲ ಎಂದು ವ್ಯಂಗ್ಯವಾಡಿದರು. ಇದು ವಿಜಯೇಂದ್ರರಿಗೆ ಹಿನ್ನಡೆನಾ ಎಂಬ ಪ್ರಶ್ನೆಗೆ, ಇದನ್ನು ಅವರಿಗೆ ಮತ್ತು ಅವರ ಪೂಜ್ಯ ತಂದೆಯವರಿಗೆ ಕೇಳಿ ಎಂದು ಯತ್ನಾಳ್​​ ಕುಟುಕಿದರು.

ಇದನ್ನೂ ಓದಿ : ರಾಜ್ಯಸಭೆ ಚುನಾವಣೆ: ಸಿಎಂ ಸಿದ್ದರಾಮಯ್ಯರಿಂದ ಮತ ಚಲಾವಣೆ, ಗೆಲುವಿನ ವಿಶ್ವಾಸ

Last Updated :Feb 27, 2024, 4:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.