ETV Bharat / state

'ಕಾಂಗ್ರೆಸ್​ನಲ್ಲಿ ಸೆಕೆಂಡ್​ ಇನ್ನಿಂಗ್ಸ್ ​ಆರಂಭಿಸಲು ತಯಾರಾಗಿದ್ದೇನೆ': ಮಲ್ಲಿಕಾರ್ಜುನ ಚರಂತಿಮಠ ಜೊತೆ ಈಟಿವಿ ಭಾರತ್​ ಸಂದರ್ಶನ - Mallikarjuna Charantimath

author img

By ETV Bharat Karnataka Team

Published : Apr 21, 2024, 7:27 PM IST

etv-bharat-interview-with-congress-leader-mallikarjuna-charantimath
ಕಾಂಗ್ರೆಸ್​ನಲ್ಲಿ ಸೆಕೆಂಡ್​ ಇನ್ನಿಂಗ್ಸ್ ​ಆರಂಭಿಸಲು ತಯಾರಿಯಾಗಿದ್ದೇನೆ: ಮಲ್ಲಿಕಾರ್ಜುನ ಚರಂತಿಮಠ ಜೊತೆ ಈಟಿವಿ ಭಾರತ್​ ಸಂದರ್ಶನ

ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಸೇರ್ಪಡೆಯಾದ ​ಮಲ್ಲಿಕಾರ್ಜುನ ಚರಂತಿಮಠ ಅವರ ಸಂದರ್ಶನ ಇಲ್ಲಿದೆ.

ಮಲ್ಲಿಕಾರ್ಜುನ ಚರಂತಿಮಠ ಜೊತೆ ಈಟಿವಿ ಭಾರತ್​ ಸಂದರ್ಶನ

ಬಾಗಲಕೋಟೆ: ಬಿಜೆಪಿಯಿಂದ ಬಂಡೆದ್ದು ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಚರಂತಿಮಠ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಅವರು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ಕಾಂಗ್ರೆಸ್​ ಪಕ್ಷ ಸೇರ್ಪಡೆ ಬಗ್ಗೆ ಏನು ಹೇಳುತ್ತೀರಾ?

ಉತ್ತರ: ಹೊಸ ಹುರುಪು ಬಂದಿದೆ, ಫಸ್ಟ್​ ಇನ್ನಿಂಗ್ಸ್​ ಬಿಜೆಪಿಯಲ್ಲಿ ಆಯಿತು, ಅಲ್ಲಿ ಸರಿಯಾಗಲಿಲ್ಲ. ಈಗ ಸೆಕೆಂಡ್​ ಇನ್ನಿಂಗ್ಸ್​ಗೆ ತಯಾರಾಗಿದ್ದೇನೆ.

ಪ್ರಶ್ನೆ: ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿದ್ದೀರಿ, ಈಗ ಕಾಂಗ್ರೆಸ್​ ಪಕ್ಷಕ್ಕೆ ಹೇಗೆ ಹೊಂದಿಕೊಳ್ಳುತ್ತೀರಾ?

ಉತ್ತರ: ಕಾಂಗ್ರೆಸ್​ ಪಕ್ಷದ ಸಿದ್ಧಾಂತದ ಪ್ರಕಾರ ಕೆಲಸ ಮಾಡುತ್ತೇನೆ.

ಪ್ರಶ್ನೆ: ಕಾಂಗ್ರೆಸ್​ ಪರವಾಗಿ ಏನನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೀರಾ?

ಉತ್ತರ: ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇನೆ.

ಪ್ರಶ್ನೆ: ಬಿಜೆಪಿ ನಾಯಕರು ಯಾರಾದರೂ ನಿಮಗೆ ಮತ್ತೆ ಪಕ್ಷಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರಾ?

ಉತ್ತರ: ನನಗೆ ಯಾರೂ ಆಹ್ವಾನ ಕೊಟ್ಟಿಲ್ಲ. ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಪಿ. ಸಿ. ಗದ್ದಿಗೌಡರ್​ ನನ್ನ ಬಳಿ ಮಾತನಾಡಿಲ್ಲ.

ಪ್ರಶ್ನೆ: ರಾಜಕೀಯದಲ್ಲಿ ನಿಮ್ಮ ಮುಂದಿನ ನಡೆ ಏನು?

ಉತ್ತರ: ಕಾಂಗ್ರೆಸ್​ನಲ್ಲಿ ಕಾರ್ಯಕರ್ತನಾಗಿ ದುಡಿಯುತ್ತೇನೆ.

ಪ್ರಶ್ನೆ: ಮುಂದಿನ ಪ್ರಧಾನಿ ಯಾರಾಗುತ್ತಾರೆ?

ಉತ್ತರ: ಮೋದಿಯವರ ಹವಾ ಕರ್ನಾಟಕ ಸೇರಿದಂತೆ ಎಲ್ಲೂ ಕಾಣುತ್ತಿಲ್ಲ. ನಮ್ಮ ಹೈಕಮಾಂಡ್​ ಯಾರನ್ನು ತೀರ್ಮಾನ ಮಾಡುತ್ತದೆಯೋ ಅವರು ಪ್ರಧಾನಿಯಾಗುತ್ತಾರೆ.

ಪ್ರಶ್ನೆ: ರಾಹುಲ್​ ಗಾಂಧಿ ಪ್ರಧಾನಿ ಹುದ್ದೆಗೆ ಯೋಗ್ಯರೇ?

ಉತ್ತರ: ರಾಹುಲ್​ ಗಾಂಧಿಯವರು ಪ್ರಧಾನಿಯಾಗಲು ಯೋಗ್ಯರಿದ್ದಾರೆ.

ಪ್ರಶ್ನೆ: ಕಾಂಗ್ರೆಸ್​ ಪಕ್ಷದಲ್ಲಿ ಯಾವುದೇ ಸ್ಥಾನಮಾನದ ಪಡೆಯುವ ಅಪೇಕ್ಷೆ ಇದೆಯಾ?

ಉತ್ತರ: ಸದ್ಯ ಹಾಗೆ ಏನು ಇಲ್ಲ, ನಾನು ಕಾಂಗ್ರೆಸ್​ ಸೇರ್ಪಡೆಯಾಗಿ ಎರಡು ದಿನ ಆಗಿದೆ. ಸಾಮಾನ್ಯ ಕಾರ್ಯಕರ್ತನಂತೆ ಪಕ್ಷಕ್ಕಾಗಿ ದುಡಿಯುತ್ತೇನೆ.

ಪ್ರಶ್ನೆ: ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಎಷ್ಟು ಮತಗಳ ಅಂತರದಿಂದ ಗೆಲ್ಲಬಹುದು?

ಉತ್ತರ: ನನ್ನ ಅಂದಾಜಿನ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ​ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಜನತೆಯ ಬದುಕಿನ ಗ್ಯಾರಂಟಿಯನ್ನು ಕಸಿದುಕೊಂಡಿದೆ: ಅರವಿಂದ ಬೆಲ್ಲದ್ - NEHA MURDER CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.