ETV Bharat / state

ಕೀಳು ಮಟ್ಟದ ಟಾರ್ಗೆಟ್ ರಾಜಕಾರಣ: ಕಾಂಗ್ರೆಸ್‌ ಶಾಸಕ ರಿಜ್ವಾನ್ ಅರ್ಷದ್

author img

By ETV Bharat Karnataka Team

Published : Feb 28, 2024, 2:56 PM IST

Updated : Feb 28, 2024, 3:52 PM IST

MLA Rizwan Arshad  India zindabad  ಶಾಸಕ ರಿಜ್ವಾನ್ ಅರ್ಷದ್  ಇಂಡಿಯಾ ಜಿಂದಾಬಾದ್​
ರಿಜ್ವಾನ್ ಅರ್ಷದ್

ನಿನ್ನೆ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಆರೋಪ ಪ್ರಕರಣ ಕುರಿತು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ

ಬೆಂಗಳೂರು: "ನಾವು ಸತ್ತರೂ ಅಥವಾ ನಮ್ಮನ್ನು ನೇಣಿಗೆ ಹಾಕಿದರೂ‌ ಸಹ ಇಂಡಿಯಾ ಜಿಂದಾಬಾದೇ. ಒಂದು ಸಮುದಾಯವನ್ನು, ಪಕ್ಷವನ್ನು ಇಷ್ಟೊಂದು ಟಾರ್ಗೆಟ್ ಮಾಡಿ ಕೀಳು ಮಟ್ಟದ ರಾಜಕಾರಣ ಮಾಡುವುದಾದರೆ ನಾವೇನು ವಿಷ ಸೇವಿಸಿ ಸಾಯಬೇಕಾ" ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಪ್ರಶ್ನಿಸಿದರು. ಇಂದು ಸದನದ ಕಲಾಪಗಳಿಗೆ ಹಾಜರಾಗುವ ಮುನ್ನ ವಿಧಾನಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ‌ ಪ್ರಕರಣದ ಕುರಿತು ಅವರು ಪ್ರತಿಕ್ರಿಯಿಸಿದರು.

"ಮಾಧ್ಯಮದವರು ಕೂಡಾ ನಿನ್ನೆಯ ಘಟನೆಗೆ ಸಾಕ್ಷಿಯಾಗಿದ್ದೀರಿ. ನಮ್ಮ ಅಭ್ಯರ್ಥಿ ನಾಸೀರ್ ಹುಸೇನ್ ಚುನಾವಣೆಯಲ್ಲಿ ಗೆದ್ದು ಬಂದ ನಂತರ ಬೆಂಬಲಿಗರು "ನಾಸೀರ್ ಖಾನ್ ಜಿಂದಾಬಾದ್, ನಾಸೀರ್ ಸಾಬ್ ಜಿಂದಾಬಾದ್" ಎಂದು ಕೂಗಿದ್ದಾರೆ. ಆದರೆ ಅದನ್ನೇ ನಮ್ಮ ನೆರೆಯ ದೇಶದ ಪರ ಘೋಷಣೆ ಕೂಗಿದ್ದಾರೆ ಎಂದು ಹೇಳುವುದು ಸರಿಯೇ?. ನಮ್ಮ ಸಮುದಾಯಕ್ಕಾಗಲಿ, ಪಕ್ಷಕ್ಕಾಗಲಿ ಇಷ್ಟು ಟಾರ್ಗೆಟ್ ಮಾಡಬೇಕಾದದ್ದೇನಿದೆ" ಎಂದರು.

"ಯಾರಾದರೂ ಆ ರೀತಿ ಕೂಗಿದ್ದರೆ ನೇಣಿಗೆ ಹಾಕಲಿ, ಸಮಗ್ರವಾದ ತನಿಖೆಯಾಗಲಿ. ಆದರೆ ನಾವು ಮಾತ್ರ ನಮ್ಮನ್ನು ನೇಣಿಗೆ ಹಾಕಿದರೂ, ಸಾಯಿಸಿದರೂ ಎಂದಿಗೂ ಇಂಡಿಯಾ ಜಿಂದಾಬಾದೇ. ಆದರೆ ಈ ಮಟ್ಟದ ಕೀಳು ರಾಜಕಾರಣದಲ್ಲಿ ಯಾರೂ ಸಹ ಸಹಿಸುವುದಿಲ್ಲ. ನಾವೇನು ವಿಷ ಸೇವಿಸಿ ಸಾಯಬೇಕಾ? ಬದುಕಬಾರದಾ?" ಎಂದು ಹೇಳಿದರು.

ಇದನ್ನೂ ಓದಿ: ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಪಾಕಿಸ್ತಾನದ ಪರ ಘೋಷಣೆ ಆರೋಪ ಪ್ರಕರಣ: 10 ನಿಮಿಷ ಸದನ ಮುಂದೂಡಿಕೆ

Last Updated :Feb 28, 2024, 3:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.