ETV Bharat / entertainment

'ರಣ್​​​ಬೀರ್​ ಕಪೂರ್​ ಸಂಸ್ಕಾರವಂತ': ಚರ್ಚೆಗೆ ಕಾರಣವಾಯ್ತು ತಾಯಿ ನೀತು ಹೇಳಿಕೆ - Ranbir Kapoor

author img

By ETV Bharat Karnataka Team

Published : Mar 31, 2024, 3:54 PM IST

Updated : Apr 2, 2024, 3:50 PM IST

Ranbir Kapoor
ರಣ್​​ಬೀರ್ ಕಪೂರ್

ನಟಿ ನೀತು ಕಪೂರ್​ ಅವರು ಮಗ ರಣ್​​ಬೀರ್ ಕಪೂರ್ 'ಸಂಸ್ಕಾರವಂತ' ಎಂದು ಹೇಳಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ.

ಜನಪ್ರಿಯ ಕಾಮಿಡಿಯನ್​ ಕಪಿಲ್ ಶರ್ಮಾ ಅವರ ಹೊಸ ನೆಟ್‌ಫ್ಲಿಕ್ಸ್ ಕಾರ್ಯಕ್ರಮ, 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ ಹಿರಿಯ ನಟಿ ನೀತು ಕಪೂರ್ ತಮ್ಮ ಮಗ ರಣ್​​ಬೀರ್ ಕಪೂರ್ ಅವರನ್ನು 'ಸಂಸ್ಕಾರವಂತ' ಎಂದು ಹೇಳಿರುವುದೀಗ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕಾರ್ಯಕ್ರಮ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ವಿಶೇಷವಾಗಿ ನೀತು ಕಪೂರ್​ ಅವರ ಹೇಳಿಕೆಯೊಂದು ಸಿಕ್ಕಾಪಟ್ಟೆ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮಗನನ್ನು ಗುಣಗಾನ ಮಾಡಿರುವುದರ ಬಗ್ಗೆ ಪರ-ವಿರೋಧ ಚರ್ಚೆ ಆಗುತ್ತಿದೆ.

ನೀತು ಕಪೂರ್ ಹೇಳಿಕೆ ಬಗ್ಗೆ ಸೋಷಿಯಲ್​ ಮೀಡಿಯಾ (Reddit) ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ರಣ್​​​​ಬೀರ್ ಅವರನ್ನು ಸಂಸ್ಕಾರಿ ಹುಡುಗ ಎಂದು ಕರೆಯೋ ನೀತು ಬಗ್ಗೆ ಬೇಸರಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವಿನಮ್ರವಾಗಿ ಕಾಣಿಸಿಕೊಂಡಿರುವ ರಣ್​​ಬೀರ್‌ ಅವರ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ನೀತು ತಮ್ಮ ಮಗನ ಬಗ್ಗೆ ಹೊಗಳಿದ್ದರ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಹಲವರು ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರೊಂದಿಗಿನ ರಣ್​​ಬೀರ್ ಅವರ ಹಿಂದಿನ ಸಂಬಂಧಗಳನ್ನು ಈ ವೇಳೆ ಎಳೆದು ತಂದಿದ್ದಾರೆ.

ನೆಟ್ಟಿಗರೋರ್ವರು ನೀತು ಅವರ ದೃಷ್ಟಿಕೋನವನ್ನು ಸಮರ್ಥಿಸಿಕೊಂಡಿದ್ದಾರೆ. ನಟಿಯ ದೃಷ್ಟಿಕೋನದಲ್ಲಿ, ರಣ್​​ಬೀರ್ ಓರ್ವ ಕರ್ತವ್ಯನಿಷ್ಠ ಮಗ. ವಿಶೇಷವಾಗಿ ಕಠಿಣ ಸಮಯದಲ್ಲಿ ತಾಯಿಯನ್ನು ಭಾವನಾತ್ಮಕವಾಗಿ ಬೆಂಬಲಿಸಿದ್ದಾರೆ. ರಣ್​​​ಬೀರ್ ಲವ್​ ರಿಲೇಶನ್​​ಶಿಪ್ಸ್ ವಿಚಾರಗಳಲ್ಲಿ ಉತ್ತಮವಾಗಿಲ್ಲದಿದ್ದರೂ, ಕುಟುಂಬದ ಬಗ್ಗೆ ಸಾಕಷ್ಟು ಕಾಳಜಿ ಉಳ್ಳ ವ್ಯಕ್ತಿ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ನಟನ ಪರ ವಾದಿಸಿದರು.

ಮತ್ತೋರ್ವ ಬಳಕೆದಾರರು ನೀತು ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಲವು ಲವ್​ ರಿಲೇಶನ್​​​ಶಿಪ್​ಗಳ ಹೊರತಾಗಿಯೂ, ತಾಯಿಯಾಗಿ ಮಗನನ್ನು ಹೊಗಳಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಗನಾಗಿ, ನೀತು ಅವರ ಜೀವನದಲ್ಲಿ ರಣ್​​ಬೀರ್ ಧನಾತ್ಮಕ ಪಾತ್ರ ನಿರ್ವಹಿಸಿದ್ದಾರೆ. ಪ್ರತಿಯೋರ್ವರ ಜೀವನದಲ್ಲೂ ಸಂಕೀರ್ಣತೆಗಳಿರುತ್ತವೆ. ಒಂದು ಅಂಶದಲ್ಲಿ ಉತ್ತಮವಾಗಿದ್ದರೆ, ಮತ್ತೊಂದರಲ್ಲಿ ಕೊರತೆಯಿರುತ್ತದೆ ಎಂದು ನಟನ ಪರ ವಾದಿಸಿದರು.

ಇದನ್ನೂ ಓದಿ: ಮಂಗಳವಾರ ಸೆಟ್ಟೇರಲಿದೆ ರಣ್​ಬೀರ್, ಸಾಯಿಪಲ್ಲವಿ, ಯಶ್ ನಟನೆಯ 'ರಾಮಾಯಣ' - Ramayana

ನೀತು ಅವರಿಗೆ ರಣ್​​ಬೀರ್ ಒಬ್ಬ ಒಳ್ಳೆಯ ಮಗ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ರಣ್​ಬೀರ್​ ಹೆಚ್ಚಾಗಿ ತಾಯಿಯ ಇಷ್ಟಗಳು ಮತ್ತು ಇಷ್ಟಪಡದಿರುವ ವಿಚಾರಗಳ ಬಗ್ಗೆ ಗಮನ ಹರಿಸುತ್ತಾರೆ. ತಾಯಿಗೆ ಭಾವನಾತ್ಮಕವಾಗಿ ಬೆಂಬಲವಾಗಿರಬಹುದು. ಅಲ್ಲದೇ, ನಟನೆಗೆ ಮರಳಲು ಪ್ರೋತ್ಸಾಹಿಸಿದ್ದಾರೆ. ಹೀಗಿದ್ದಲ್ಲಿ ಓರ್ವ ತಾಯಿಯಾಗಿ ಮಗನನ್ನು ಏಕೆ ಹೊಗಳುವುದಿಲ್ಲ ಹೇಳಿ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: '12th ಫೇಲ್' ನಟ ವಿಕ್ರಾಂತ್ ತಮಗೆ ಸಿಕ್ಕ 'ವರ್‌ದಾನ್‌'ಗೆ ಖುಷಿ ವ್ಯಕ್ತಪಡಿಸಿದ್ದು ಹೀಗೆ - Vikrant Massey Tattoo

ಕಾಫಿ ವಿತ್ ಕರಣ್ ಸೀಸನ್ 8ರಲ್ಲಿ ಸೈಫ್ ಅಲಿ ಖಾನ್ ಅವರೊಂದಿಗೆ ತಾಯಿ, ಹಿರಿಯ ನಟಿ ಶರ್ಮಿಳಾ ಠಾಗೋರ್ ಕಾಣಿಸಿಕೊಂಡಿದ್ದರು. ಆ ಶೋಗೂ ಕಪಿಲ್​ ಶರ್ಮಾ ಅವರ ಈ ಶೋಗೂ ಹೋಲಿಸಿ, ನೀತು ಕಪೂರ್​ ಹೇಳಿಕೆ ಸರಿಯೇ ಎಂದು ಹಲವರು ಪ್ರಶ್ನಿಸಿದ ಹಿನ್ನೆಲೆ ವಾದ-ವಿವಾದ ಉಲ್ಬಣಗೊಳ್ಳಲು ಕಾರಣವಾಯಿತು. ಕೆಲವರು ರಣ್​​ಬೀರ್ ಅವರ ತೀರಾ ವೈಯಕ್ತಿಕ (ಪ್ರೇಮ ಸಂಬಂಧಗಳು) ವಿಚಾರಗಳನ್ನು ಇಲ್ಲಿ ಎಳೆದು ತಂದು ಟೀಕಿಸಿದರು. ಹಳೆಯ ರಿಲೀಶನ್​ಶಿಪ್​​ ಬಗ್ಗೆಯೂ ಇಲ್ಲಿ ಚರ್ಚೆ ನಡೆಸಲಾಗಿದೆ.

Last Updated :Apr 2, 2024, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.