ETV Bharat / bharat

ಜ್ಞಾನವಾಪಿಯಲ್ಲಿ ಪೂಜೆ ನಿಲ್ಲಿಸಲು ಕೋರಿದ ಅರ್ಜಿ ಸುಪ್ರೀಂಕೋರ್ಟ್​ನಲ್ಲಿಂದು ವಿಚಾರಣೆ - gyanvapi case

author img

By ETV Bharat Karnataka Team

Published : Apr 30, 2024, 1:23 PM IST

ಜ್ಞಾನವಾಪಿಯಲ್ಲಿ ಪೂಜೆ ನಿಲ್ಲಿಸಲು ಕೋರಿದ ಅರ್ಜಿ
ಜ್ಞಾನವಾಪಿಯಲ್ಲಿ ಪೂಜೆ ನಿಲ್ಲಿಸಲು ಕೋರಿದ ಅರ್ಜಿ

ಜ್ಞಾನವಾಪಿಯಲ್ಲಿ ನಡೆಯುತ್ತಿರುವ ಪೂಜೆ ನಿಲ್ಲಿಸಬೇಕು ಎಂದು ಕೋರಿ ಮುಸ್ಲಿಂ ಪಕ್ಷಗಾರರು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ನಡೆಯುಲಿದೆ.

ವಾರಾಣಸಿ (ಉತ್ತರಪ್ರದೇಶ): ಕಾಶಿ ವಿಶ್ವನಾಥನ ಹಳೆಯ ದೇಗುಲ ಎಂದೇ ಹೇಳಲಾಗುವ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನಡೆಯುತ್ತಿರುವ ಪೂಜೆಯನ್ನು ನಿಲ್ಲಿಸಬೇಕು ಎಂದು ಕೋರಿ ಮುಸ್ಲಿಂ ಪಕ್ಷದವರು ಸಲ್ಲಿಸಿದ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್​ ಇಂದು (ಮಂಗಳವಾರ) ವಿಚಾರಣೆ ನಡೆಸಲಿದೆ.

ಸನಾತನ ಧರ್ಮದ ಪದ್ಧತಿಗಳಂತೆ ಜ್ಞಾನವಾಪಿಯಲ್ಲಿ ನಡೆಯುತ್ತಿರುವ ಪೂಜೆಗೆ ಅವಕಾಶ ನೀಡಿದ ವಾರಾಣಸಿ ಜಿಲ್ಲಾ ಕೋರ್ಟ್​ನ ಆದೇಶವನ್ನು ರದ್ದು ಮಾಡಬೇಕು ಎಂದು ಅಲಹಾಬಾದ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕೋರ್ಟ್​ ಇನ್ನು ಅಮಾನ್ಯ ಮಾಡಿ, ಪೂಜಾ ಪದ್ಧತಿಯನ್ನು ಮುಂದುವರಿಸಲು ಸೂಚಿಸಿತ್ತು. ಇದರ ವಿರುದ್ಧ ಅಂಜುಮನ್​ ಮಸೀದಿ ಸಮಿತಿಯು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಇದರ ವಿಶೇಷ ವಿಚಾರಣೆ ಇಂದು ಜರುಗಲಿದೆ.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಪರ ಮತ್ತು ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಲಿಖಿತ ವಾದಗಳನ್ನು ಮಂಡಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಹೇಳಲಾಗಿದೆ.

ಅಲಹಾಬಾದ್​ ಹೈಕೋರ್ಟ್​ ತೀರ್ಪೇನು?: ಮಸೀದಿಯ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಬಹುದು. ಉತ್ತರ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಈ ಹಿಂದೆ ತೀರ್ಪು ನೀಡಿತ್ತು. ಪೂಜಾ ವಿಧಾನಗಳಿಗೆ ಅಡ್ಡಿಯಾಗದಂತೆ ಜಿಲ್ಲಾಧಿಕಾರಿ ನೇತೃತ್ವ ವಹಿಸಲೂ ಸೂಚಿಸಿತ್ತು. ಅದರಂತೆ ನಿತ್ಯ ಪೂಜೆ ಸಾಗುತ್ತಿದೆ.

ಇದರ ವಿರುದ್ಧ ಮುಸ್ಲಿಂ ಪಕ್ಷಗಾರರು ಅಲಹಾಬಾದ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಪೂರ್ತಿಗೊಳಿಸಿದ ನ್ಯಾಯಪೀಠ, ವಾರಾಣಸಿ ಜಿಲ್ಲಾ ಕೋರ್ಟ್​ನ ತೀರ್ಪನ್ನು ಎತ್ತಿಹಿಡಿದು ಫೆ.26ರಂದು ಆದೇಶಿಸಿತು. ಜ್ಞಾನವಾಪಿಯಲ್ಲಿ ಈಗ ನಡೆಯುತ್ತಿರುವ ಪೂಜಾ ಪದ್ಧತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದರಿಂದ ಯಾವುದೇ ಪಂಗಡಕ್ಕೆ ಸಮಸ್ಯೆಯಾಗುತ್ತಿಲ್ಲ. ದಕ್ಷಿಣದಲ್ಲಿ ಪೂಜೆ, ಉತ್ತರದಲ್ಲಿ ಪ್ರಾರ್ಥನೆ ಯಥಾವತ್ತಾಗಿ ಸಾಗಲಿ ಎಂದು ಹೇಳಿತ್ತು.

ಇದರ ವಿರುದ್ಧ ಮಸೀದಿ ಸಮಿತಿ ಸುಪ್ರೀಂಕೋರ್ಟ್​ ಮೊರೆ ಹೋಗಿದೆ. ಈ ಕುರಿತು ನ್ಯಾಯಾಲಯ ಎರಡೂ ಗುಂಪುಗಳಿಗೆ ನೋಟಿಸ್ ಜಾರಿ ಮಾಡಿ, ಏಪ್ರಿಲ್ 30ರವರೆಗೆ ಪ್ರತಿಕ್ರಿಯಿಸಲು ಅವಕಾಶ ನೀಡಿತ್ತು. ಹೀಗಾಗಿ ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ.

ಪ್ರಕರಣದ ಹಿನ್ನೆಲೆ: 1993 ರವರೆಗೆ ಸೋಮನಾಥ ವ್ಯಾಸ್ ಅವರ ಕುಟುಂಬವು ಜ್ಞಾನವಾಪಿಯಲ್ಲಿನ ನೆಲಮಾಳಿಗೆಯಲ್ಲಿ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದರು. ಅಂದಿನ ಸರ್ಕಾರ ಯಾವುದೇ ಸೂಚನೆ ಅಥವಾ ಆದೇಶವಿಲ್ಲದೇ ಪೂಜೆ ನಿಲ್ಲಿಸಿತ್ತು. ಮಸೀದಿ ಎಂದು ಹೇಳಲಾಗುವ ಕಟ್ಟಡ ಪುರಾತನ ದೇವಾಲಯವಾಗಿದೆ. 17ನೇ ಶತಮಾನದಲ್ಲಿ ಇದರ ಒಂದು ಭಾಗವನ್ನು ಔರಂಗಜೇಬ್​ ಕೆಡವಿಸಿದ್ದ ಎಂಬುದು ಹಿಂದುಗಳ ವಾದವಾಗಿದೆ. ಕೆಲ ಪ್ರಾಚ್ಯವಸ್ತು ಸಂಶೋಧಕರ ಅಭಿಪ್ರಾಯವೂ ಇದೆ ಆಗಿದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ: ಏಪ್ರಿಲ್​ 1 ರಂದು ಮುಸ್ಲಿಂ ಪರ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ - puja in Gyanvapi cellar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.