ETV Bharat / bharat

ತೀರ್ಪಿನಿಂದ ಅಸಮಾಧಾನ: ಪಾಟ್ನಾ ಹೈಕೋರ್ಟ್ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಕೀಲ

author img

By ETV Bharat Karnataka Team

Published : Feb 2, 2024, 9:21 PM IST

ಪಾಟ್ನಾ ಹೈಕೋರ್ಟ್ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಕೀಲ
ಪಾಟ್ನಾ ಹೈಕೋರ್ಟ್ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಕೀಲ

ವಕೀಲರೊಬ್ಬರು ಪಾಟ್ನಾ ಹೈಕೋರ್ಟ್ ಛಾವಣಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.

ಪಾಟ್ನಾ ಹೈಕೋರ್ಟ್ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಕೀಲ

ಪಾಟ್ನಾ (ಬಿಹಾರ) : ಸಾಮಾನ್ಯವಾಗಿ ನ್ಯಾಯಾಲಯವೊಂದರಲ್ಲಿ ನೀಡಲಾಗುವ ತೀರ್ಪಿನಿಂದ ಕೆಲವೊಮ್ಮೆ ಜನಸಾಮಾನ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸುವುದನ್ನು ನೀವು ಹಲವಾರು ಬಾರಿ ನೋಡಿರಬಹುದು ಮತ್ತು ಕೇಳಿರಲೂಬಹುದು. ಆದರೆ ಇಲ್ಲೊಬ್ಬ ವಕೀಲರು ವಿಭಿನ್ನ ರೀತಿಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಇಡೀ ನ್ಯಾಯಾಲಯದ ಆವರಣದಲ್ಲಿ ಗೊಂದಲ ಸೃಷ್ಠಿಯಾಗಿತ್ತು. ಈ ಘಟನೆ ಜನರಲ್ಲಿ ಚರ್ಚೆಗೂ ಗ್ರಾಸವಾಗಿದೆ. ವಕೀಲರ ಹೈವೋಲ್ಟೇಜ್ ನಾಟಕ ಜನರನ್ನು ಕೆಲಕಾಲ ನಿಂತು ನೋಡುವಂತೆ ಮಾಡಿತು.

ಪಾಟ್ನಾ ಹೈಕೋರ್ಟ್‌ನಲ್ಲಿ ವಕೀಲರ ಹೈವೋಲ್ಟೇಜ್ ನಾಟಕ : ವಾಸ್ತವವಾಗಿ ವಕೀಲರು ಪಾಟ್ನಾ ಹೈಕೋರ್ಟ್‌ನ ಮೇಲ್ಛಾವಣಿಯಿಂದ ಬಾಲ್ಕನಿಗೆ ಜಿಗಿದಿದ್ದಾರೆ. ಅಲ್ಲಿಂದ ಅವರನ್ನು ಇತರ ವಕೀಲರು ಮತ್ತು ಪೊಲೀಸರ ಸಹಾಯದಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಶಿವಪೂಜನ್ ಝಾ ಎಂಬ ವಕೀಲರೇ ನ್ಯಾಯಾಲಯದ ಆವರಣದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿ ಕೋಲಾಹಲ ಸೃಷ್ಟಿಸಿದ ಲಾಯರ್​ ಆಗಿದ್ದಾರೆ. ವಿಷಯದ ಬಗ್ಗೆ ಮಾಹಿತಿ ಬಂದ ತಕ್ಷಣ, ಹೈಕೋರ್ಟ್ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿ ಸಕಾಲದಲ್ಲಿ ವಕೀಲರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಪ್ರತ್ಯಕ್ಷದರ್ಶಿಗಳ ಹೇಳಿಕೆ : ವಕೀಲರು ಹೈಕೋರ್ಟ್​ ಆವರಣದಲ್ಲಿ ಆತ್ಮಹತ್ಯೆಯಂತಹ ಹೆಜ್ಜೆ ಇಟ್ಟರು. ನಂತರ ಇಡೀ ಹೈಕೋರ್ಟ್ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು ಎಂದು ಕೋರ್ಟ್​ನಲ್ಲಿನ ನೌಕರರು ಹಾಗೂ ಪ್ರಕರಣದ ವಿಚಾರಣೆಗೆ ಬಂದಿದ್ದ ವಕೀಲರು ತಿಳಿಸಿದ್ದಾರೆ. "ವಕೀಲ ಶಿವಪೂಜನ್ ಇಂತಹ ಆತ್ಮಹತ್ಯೆಯ ಹೆಜ್ಜೆ ಇಟ್ಟಿದ್ದಾರೆ. ಅವರು ಛಾವಣಿಯ ಮೇಲಿನ ರೇಲಿಂಗ್‌ನಿಂದ ಬಾಲ್ಕನಿಗೆ ಹಾರಿದರು. ಭದ್ರತಾ ಸಿಬ್ಬಂದಿ ಅವರನ್ನು ಸಕಾಲದಲ್ಲಿ ತಡೆದರು" ಎಂದು ಪ್ರತ್ಯಕ್ಷದರ್ಶಿ ಸಂಜಯ್ ಕುಮಾರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನ್ಯಾಯಾಧೀಶರ ತೀರ್ಪಿಗೆ ಸಿಟ್ಟಿಗೆದ್ದ ವಕೀಲ : ವಕೀಲರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿ ಮೇಲ್ಛಾವಣಿಯಿಂದ ಬಾಲ್ಕನಿಗೆ ಹಾರಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ವೇಳೆ, ಅಲ್ಲಿ ನೆರೆದಿದ್ದ ಜನರು ಹೈಕೋರ್ಟ್‌ಗೆ ಮಾನಹಾನಿ ಮಾಡಬೇಡಿ ಎಂದು ಮನವಿ ಮಾಡುತ್ತಿರುವುದು ಕಂಡುಬಂದಿದೆ.

2.5 ಲಕ್ಷ ದಂಡ : ವಾಸ್ತವವಾಗಿ ನ್ಯಾಯಾಧೀಶರ ತೀರ್ಪಿನಿಂದ ಕೋಪಗೊಂಡ ವಕೀಲರು ಈ ಆತ್ಮಹತ್ಯೆಯ ಹೆಜ್ಜೆ ಇಟ್ಟಿದ್ದರು ಎಂಬುದಾಗಿ ತಿಳಿದು ಬಂದಿದೆ. 'ನ್ಯಾಯಾಲಯ ನಮಗಾಗಿ, ನಾವು ನ್ಯಾಯಾಲಯಕ್ಕಾಗಿ ಅಲ್ಲ' ಎಂದು ವಕೀಲರು ಮೇಲ್ಛಾವಣಿಯಿಂದಲೇ ಕೂಗಲು ಪ್ರಾರಂಭಿಸಿದ್ದಾರೆ. ವಕೀಲ ಮತ್ತು ಆತನ ಪತ್ನಿ ನಡುವೆ ವರದಕ್ಷಿಣೆ ವಿಚಾರವಾಗಿ ಪ್ರಕರಣ ನಡೆಯುತ್ತಿತ್ತು. ಹೈಕೋರ್ಟ್ ಅವರಿಗೆ 2.5 ಲಕ್ಷ ದಂಡ ವಿಧಿಸಿತ್ತು. ಇದರಿಂದ ಅಸಮಾಧಾನಗೊಂಡ ವಕೀಲರು ನೇರವಾಗಿ ಪಾಟ್ನಾ ಹೈಕೋರ್ಟ್‌ನ ಬಾಲ್ಕನಿ ಮೇಲೆ ಹತ್ತಿ ಈ ಕೃತ್ಯಕ್ಕೆ ಮುಂದಾಗಿದ್ದರು.

ಇದನ್ನೂ ಓದಿ: ಕೋರ್ಟ್​​​ ಹಾಲ್​​ನಲ್ಲೇ ಆತ್ಯಹತ್ಯೆ ಯತ್ನ ಮಾಡಿದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.