ಬೇಲಿಯೇ ಎದ್ದು ಹೊಲ ಮೇಯ್ದ ಕಥೆ.. ₹22.53 ಲಕ್ಷದೊಂದಿಗೆ ಪರಾರಿಯಾದ ಬ್ಯಾಂಕ್​ ಕ್ಯಾಶಿಯರ್​​​​!

By

Published : May 11, 2022, 5:03 PM IST

thumbnail

ಹೈದರಾಬಾದ್ : ಇಲ್ಲಿನ ವನಸ್ಥಲಿಪುರಂನ ಸಾಹೇಬ್​ ನಗರ ಶಾಖೆಯ ಬ್ಯಾಂಕ್​ ಆಫ್​ ಬರೋಡಾದಲ್ಲಿ ಕ್ಯಾಶಿಯರ್​ ಆಗಿ ಕೆಲಸ ಮಾಡ್ತಿದ್ದ ಪ್ರವೀಣ್​​ ಬರೋಬ್ಬರಿ 22.53 ಲಕ್ಷ ರೂಪಾಯಿ ಜೊತೆ ಪರಾರಿಯಾಗಿದ್ದಾನೆ. ಬ್ಯಾಂಕ್​​ ಅಧಿಕಾರಿಗಳಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಅನಾರೋಗ್ಯದ ಕಾರಣ ಔಷಧಿ ತೆಗೆದುಕೊಂಡು ಬರುವುದಾಗಿ ಬ್ಯಾಂಕ್​ ಅಧಿಕಾರಿಗಳಿಂದ ಅನುಮತಿ ಪಡೆದ ಪ್ರವೀಣ್​, ಬಳಿಕ ನಗದಿನೊಂದಿಗೆ ಪರಾರಿಯಾಗಿದ್ದಾನೆ. ಸಂಜೆಯವರೆಗೂ ವಾಪಸ್​ ಬಾರದ ಕಾರಣ ಬ್ಯಾಂಕ್​ ಅಧಿಕಾರಿಗಳು ಹಣದ ಲೆಕ್ಕಾಚಾರ ನಡೆಸಿದಾಗ, ಈ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ವನಸ್ಥಲಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರವೀಣ್​ ಆನ್​ಲೈನ್ ಗೇಮ್​​ ಚಟಕ್ಕೆ ಬಿದ್ದು ಅಪಾರ ಹಣ ಕಳೆದುಕೊಂಡಿದ್ದರಿಂದ ಈ ನಗದು ಕದ್ದಿರಬಹುದು ಎನ್ನಲಾಗ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.