ವಿರಾಟ್​​ ವಿಶ್ವದರ್ಜೆ ಕ್ರಿಕೆಟಿಗ, ದೇಶಕ್ಕಾಗಿ ಪಂದ್ಯ ಗೆಲ್ಲುವ ಹಸಿವಿನ್ನೂ ಇದೆ: ಕೆ ಎಲ್ ರಾಹುಲ್​

By

Published : Aug 26, 2022, 8:29 PM IST

thumbnail

ಕಳಪೆ ಬ್ಯಾಟಿಂಗ್​​ನಿಂದ ತೀವ್ರ ಟೀಕೆಗೊಳಗಾಗಿರುವ ಕ್ರಿಕೆಟಿಗ ವಿರಾಟ್​​ ಕೊಹ್ಲಿ ಏಷ್ಯಾ ಕಪ್​​​ನಲ್ಲಿ ಮಿಂಚು ಹರಿಸುವ ನಿರೀಕ್ಷೆ ಇದೆ. ಈ ಕುರಿತ ಪ್ರಶ್ನೆಗಳಿಗೆ ಟೀಂ ಇಂಡಿಯಾ ಉಪನಾಯಕ ಕೆ ಎಲ್ ರಾಹುಲ್ ಉತ್ತರಿಸಿ, ನಾನು ಗಾಯಗೊಂಡು ಎರಡು ತಿಂಗಳ ಕಾಲ ಮನೆಯಲ್ಲಿದ್ದಾಗ ಕೊಹ್ಲಿ ಬ್ಯಾಟಿಂಗ್​ ಅನ್ನು ಟಿವಿಯಲ್ಲಿ ನೋಡಿದ್ದೇನೆ. ಅವರು ಫಾರ್ಮ್​​ನಿಂದ ಹೊರಬಿದ್ದಿದ್ದಾರೆಂದು ನನಗನ್ನಿಸುತ್ತಿಲ್ಲ. ಕೆಲವೊಮ್ಮೆ ವಿಕೆಟ್​​ ಒಪ್ಪಿಸಿದ್ದಾರೆ. ಅವರ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ. ಅದು ಆಟಗಾರನ ಮೇಲೆ ಯಾವುದೇ ಪರಿಣಾಮ ಬೀರದು. ಅವರು ಸ್ವಲ್ಪ ವಿರಾಮ ಪಡೆದುಕೊಂಡಿದ್ದಾರೆ. ಆತ​ ಓರ್ವ ವಿಶ್ವದರ್ಜೆಯ ಆಟಗಾರ. ದೇಶಕ್ಕಾಗಿ ಪಂದ್ಯ ಗೆಲ್ಲಬೇಕೆಂಬ ಹಸಿವೂ ಇನ್ನೂ ಅವರಲ್ಲಿದೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.