ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚಿದ್ದ ಮೂಶಿಕ ವಾಹನ.. ಸತ್ಯ ಗಣಪತಿಯ ನಿಮಜ್ಜನ
ಸ್ವಾತಂತ್ರ್ಯ ಚಳುವಳಿ ಪ್ರವರ್ಧಮಾನದಲ್ಲಿದ್ದ ವೇಳೆ ಸ್ವಾತಂತ್ರ್ಯದ ಕಿಚ್ಚು ಹಚ್ಚಲು ದೇಶದೆಲ್ಲೆಡೆ ಗಣೇಶೋತ್ಸವಕ್ಕೆ ಮೆರಗು ನೀಡಲಾಗುತ್ತಿತ್ತು. ಅದೇ ರೀತಿ ತಿಪಟೂರು ಪಟ್ಟಣದಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರ ತಿಮ್ಮಪ್ಪಯ್ಯ ಅವರು ಸತ್ಯ ಗಣಪತಿ ಪ್ರತಿಷ್ಠಾಪಿಸಿ ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದರು. ಅಂದಿನಿಂದ ಈವರೆಗೂ ತಿಪಟೂರಿನಲ್ಲಿ ಗಣೇಶೋತ್ಸವ ಅನೂಚಾನವಾಗಿ ನಡೆಯುತ್ತಿದೆ. ಈ ಬಾರಿ 90 ದಿನಗಳ ಕಾಲ ಪೂಜಿಸಲ್ಪಟ್ಟ ಸತ್ಯ ಗಣಪತಿಯನ್ನು ನಿನ್ನೆ ರಾತ್ರಿ ತಿಪಟೂರು ಪಟ್ಟಣದ ಅಮಾನಿಕೆರೆ ಕಲ್ಯಾಣಿಯಲ್ಲಿ ಸಂಭ್ರಮ ಸಡಗರದಿಂದ ನಿಮಜ್ಜನ ಮಾಡಲಾಯಿತು.
Last Updated : Nov 25, 2019, 1:19 PM IST