ಚಾಮರಾಜನಗರದಲ್ಲಿ ಭರ್ಜರಿ ಮಳೆ... ಲಾಕ್​​ಡೌನ್ ಸಡಿಲಿಕೆ ಸಿಕ್ರೂ ಮನೆಯಿಂದ ಹೊರ ಬರಲಾಗದ ಜನ

By

Published : Apr 29, 2020, 11:19 AM IST

thumbnail

ಚಾಮರಾಜನಗರ: ಮಂಗಳವಾರ ರಾತ್ರಿ ಹಾಗೂ ಇಂದು ಮುಂಜಾನೆಯಿಂದ ಜಿಲ್ಲಾದ್ಯಂತ ಅಲ್ಲಲ್ಲಿ ಜೋರು ಮಳೆಯಾಗುತ್ತಿದ್ದು ರೈತರ ಮೊಗದಲ್ಲಿ ಸಂತಸ ವ್ಯಕ್ತವಾಗಿದೆ. ಚಾಮರಾಜನಗರ, ಕೊಳ್ಳೇಗಾಲ ಹಾಗೂ ಹನೂರು ಭಾಗದಲ್ಲಿ ಇಂದು ಮುಂಜಾನೆಯಿಂದ ಜೋರು ಮಳೆಯಾಗುತ್ತಿದ್ದು ಗುಂಡ್ಲುಪೇಟೆಯಲ್ಲಿ ರಾತ್ರಿ ಸಾಧಾರಣ ಮಳೆಯಾಗಿದೆ. ಪೂರ್ವ ಮುಂಗಾರಿನ ಭರ್ಜರಿ ಎಂಟ್ರಿಯಾಗಿದ್ದು ರೈತರ ಬಿತ್ತನೆ ಕಾರ್ಯಕ್ಕೆ ಅನೂಕೂಲವಾಗಲಿದೆ. ಇನ್ನು, ಲಾಕ್​​ಡೌನ್​ ಸಡಿಲಿಕೆಯಿಂದ ಸಂತಸಗೊಂಡು ತಿರುಗಾಡುತ್ತಿದ್ದವರಿಗೆ ವರುಣ ಬ್ರೇಕ್ ಹಾಕಿದ್ದು ಎಲ್ಲರನ್ನೂ ಮನೆ ಸೇರುವಂತೆ ಮಾಡಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.