ಸ್ಪರ್ಧೆಗಾಗಿ ನಾನು ನಾಟಕಗಳನ್ನು ಮಾಡಿಸುವುದಿಲ್ಲ, ಮಾಡಿದ ನಾಟಕಗಳಿಗೆ ಪ್ರಶಸ್ತಿ ಬಂದಿರುವುದು ಸಂತಸ: ಮಂಜುನಾಥ್ ಬಡಿಗೇರ್
ಬೆಂಗಳೂರಿನ ರಂಗಶಂಕರದಲ್ಲಿ ಅತ್ಯಂತ ಯಶಸ್ವಿ 2 ಪ್ರದರ್ಶವನ್ನು ಕಂಡು ಜನಮೆಚ್ಚುಗೆಗೆ ಪಾತ್ರವಾದ ಸಮಷ್ಟಿ ರಂಗತಂಡದ ಜನಪ್ರಿಯ 'ಕಂತು' ನಾಟಕವು ವೈಚಾರಿಕ ಹಾಗೂ ಧಾರ್ಮಿಕ ವಿಚಾರಗಳ ಹೊಯ್ದಾಟದ ನಡುವೆ ಅತ್ಯಂತ ವ್ಯವಸ್ಥಿತವಾಗಿ ಹಣದ ಕಥಾಹಂದರವಾಗಿದೆ. ಈ ನಾಟಕ ಹಾಗೂ ಇದು ಇತ್ತೀಚೆಗೆ ಉಡುಪಿಯಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಪಡೆದ ವಿವಿಧ ಪ್ರಶಸ್ತಿ ಸೇರಿದಂತೆ ಹಲವು ವಿಚಾರಗಳನ್ನು ಕುರಿತು ಈಟಿವಿ ಭಾರತ್ ಜತೆ ಸಮಷ್ಟಿ ತಂಡದ ನಿರ್ದೇಶಕ ಹಾಗೂ ನೀನಾಸಂ ಪದವೀಧರ ಮಂಜುನಾಥ್ ಬಡಿಗೇರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ