ಲಸಿಕೆ ಅಭಿಯಾನಕ್ಕೆ ಸಂಭ್ರಮಾಚರಣೆ.. ಈಡುಗಾಯಿ ಒಡೆದು ಸಿಹಿ ವಿತರಣೆ
![ETV Thumbnail thumbnail](https://etvbharatimages.akamaized.net/etvbharat/prod-images/320-214-10262677-thumbnail-3x2-bngjpg.jpg)
ಚಾಮರಾಜನಗರ: ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನ ಆರಂಭವಾದ ಹಿನ್ನೆಲೆಯಲ್ಲಿ ನಗರದಲ್ಲಿಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಚಾಮರಾಜೇಶ್ವರ ದೇಗುಲ ಮುಂಭಾಗ ಚಾ.ರಂ.ಶ್ರೀನಿವಾಸಗೌಡ, ಗೋವಿಂದರಾಜು ನೇತೃತ್ವದಲ್ಲಿ ಕಾರ್ಯಕರ್ತರು ಜಮಾಯಿಸಿ ಕೊರೊನಾ ವಾರಿಯರ್ಸ್ಗಳಿಗೆ, ವಿಜ್ಞಾನಿಗಳಿಗೆ ಜಯ ಘೋಷಣೆ ಕೂಗಿ ಈಡುಗಾಯಿ ಒಡೆದರು. ಬಳಿಕ ಪೊಲೀಸರಿಗೆ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಲಸಿಕೆ ಪಡೆದವರಿಗೆ ಒಳ್ಳೆಯದಾಗಲಿ ಹಾಗೂ ಮಹಾಮಾರಿ ಶೀಘ್ರ ತೊಲಗಲಿ ಎಂದು ಹಾರೈಸಿದರು.