ಖಾಕಿ ಸರ್ಪಗಾವಲಿನಲ್ಲಿ ಗಣೇಶೋತ್ಸವ... ಬಿಸಿಲನಾಡಲ್ಲಿ ಅದ್ಧೂರಿ ಗಣೇಶ ಚತುರ್ಥಿ

By

Published : Sep 2, 2019, 7:03 PM IST

thumbnail

ರಾಯಚೂರು ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಒಟ್ಟು 1845 ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಯಾಗಿವೆ. ನಗರದಲ್ಲಿ 337, ಗ್ರಾಮೀಣ ಪ್ರದೇಶದಲ್ಲಿ-402, ಲಿಂಗಸೂಗೂರು-387, ಸಿಂಧನೂರು-719 ಗಣೇಶ ಮೂರ್ತಿಗಳನ್ನು ಕೂರಿಸಲಾಗಿದೆ. ಪೊಲೀಸ್ ಇಲಾಖೆ ಶಾಂತಿಯುತ ಹಬ್ಬದ ಆಚರಣೆಗೆ ಮುಂದಾಗಿದ್ದು, ಡಿವೈಎಸ್ಪಿ-03, ಸಿಪಿಐ-12, ಪಿಎಸ್ ಐ-25, ಎಎಸ್ಐ-70, ಮುಖ್ಯಪೇದೆಗಳು-580, ಮಹಿಳಾ ಮುಖ್ಯಪೇದೆಗಳು-58, ಕೆಎಸ್ ಆರ್ ಪಿ-06 ತುಕಡಿಗಳು, ಡಿಎಆರ್-10, ಹೋಮ್ ಗಾರ್ಡ್ಸ್-300 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಿದೆ. ಎಲ್ಲಾ ಕಡೆ ನಿಗಾವಹಿಸಲು ನಗರದಲ್ಲಿ-250, ತಾಲೂಕು ಪ್ರದೇಶದಲ್ಲಿ-350 ಸೇರಿ ಒಟ್ಟು 600 ಸಿಸಿ ಕ್ಯಾಮರಾಗಳನ್ನ ಆಳವಡಿಸುವ ಮೂಲಕ ಬಿಗಿ ಬಂದೋಬಸ್ತ್​​ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.