ಕಾವೇರಿ ಅಭಯಾರಣ್ಯದಲ್ಲಿ ಕಡವೆ ಬೇಟೆಯಾಡಿದ ಖದೀಮರ ಬಂಧನ

By

Published : Sep 18, 2019, 9:21 PM IST

thumbnail

ರಾಮನಗರ: ಕನಕಪುರ ತಾಲೂಕಿನ ಕಾವೇರಿ ಅಭಯಾರಣ್ಯದಲ್ಲಿ ಕಡವೆವೆಯನ್ನು ಬೇಟೆಯಾಡಿ, ಅದನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಬೇಟೆಗಾರರನ್ನು ಕನಕಪುರ ವಲಯ ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರನ್ನು ಕುರಿಮಂದೆದೊಡ್ಡಿ ಗ್ರಾಮದ ನಾರಾಯಣ, ಪುಟ್ಟಸ್ವಾಮಿ, ವೆಂಕಟರಾಮು ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಸವನ ಬೆಟ್ಟದ ಸಂಗಮ ಮೀಸಲು ಅರಣ್ಯ ವಲಯದ ಹರಿಹರ ಬಳಿ ಕಾಳಚನ್ನಯ್ಯ ಕೆರೆ ಬಳಿ ಕಡವೆಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕನಕಪುರ ವಲಯ ಅರಣ್ಯ ಸಿಬ್ಬಂದಿಯವರು ಮೂವರು ಆರೋಪಿಗಳನ್ನು ಬಂಧಿಸಿ, ಬೇಟೆಯಾಡಿದ್ದ ಕಡವೆಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ತನಿಖೆ‌ ಮುಂದುವರಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.