ಅಭಿಮಾನಿ ದೇವರುಗಳಿಗೆ ಊಟ ಬಡಿಸಿದ ಶಿವಣ್ಣ, ಅಶ್ವಿನಿ ಪುನೀತ್ ರಾಜ್​​ಕುಮಾರ್

By

Published : Nov 9, 2021, 12:45 PM IST

Updated : Nov 9, 2021, 1:26 PM IST

thumbnail

ನಟ ಪುನೀತ್​ ರಾಜ್​ಕುಮಾರ್​ ಅಗಲಿ ಇಂದಿಗೆ 12ದಿನ ಪೂರ್ಣಗೊಂಡ ಹಿನ್ನೆಲೆ ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದೆ. ಅಭಿಮಾನಿಗಳಿಗೆ ಪುನೀತ್ ರಾಜ್​​ಕುಮಾರ್ ಪತ್ನಿ ಅಶ್ವಿನಿ ಪುನೀತ್​ರಾಜ್​​​​ಕುಮಾರ್ ಊಟ ಬಡಿಸಿದ್ದಾರೆ. ಅವರ ಜೊತೆ ನಟ ಶಿವ ರಾಜ್​​ಕುಮಾರ್​ ಹಾಗೂ ಸಹೋದರ ರಾಘವೇಂದ್ರ ರಾಜ್ ಕುಮಾರ್ ಸಹ ಅಪ್ಪು ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ. ಬಳಿಕ ಮಾತನಾಡಿದ ಶಿವರಾಜ್​​ಕುಮಾರ್​, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ಯಾವುದೇ ಗೊಂದಲವಾಗಬಾರದು. ಅಪ್ಪು ಮಾಡಿದ ಸಾಮಾಜಿಕ ಕಾರ್ಯಗಳು ನಮಗೇ ತಿಳಿದಿರಲಿಲ್ಲ, ಅಪ್ಪು ನಮ್ಮಿಂದ ದೂರ ಆದಮೇಲೆ ಅವನು ಮಾಡಿರೋ ಸೇವೆಗಳು ಹೊರಗಡೆ ಬರುತ್ತಿವೆ ಎಂದಿದ್ದಾರೆ.

Last Updated : Nov 9, 2021, 1:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.