ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅಚ್ಚರಿ ಮೂಡಿಸಿದ ಶ್ವಾನ
ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಮಸ್ತ ಭಕ್ತ ಸಮೂಹ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳಿಗೆ ಭಕ್ತಿಪೂರ್ವಕ ನುಡಿ ನಮನ ಕಾರ್ಯಕ್ರಮ ನಡೆಸಿತು. ಈ ವೇಳೆ ಜನ ದಟ್ಟಣೆ ನಡುವೆಯೇ ವೇದಿಕೆ ಮೇಲೆ ಶ್ವಾನವೊಂದು ಆಗಮಿಸಿ, ಶತಮಾನದ ಸಂತ, ಮಹಾನ್ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಎದುರು ನಿಂತಿತು. ಜೊತೆಗೆ ಅಲ್ಲಿಂದ ಎಲ್ಲೂ ಕದಲದೇ 20 ನಿಮಿಷದವರೆಗೆ ಶ್ರೀಗಳ ನುಡಿ ನಮನದಲ್ಲಿ ಭಾಗವಹಿಸಿತ್ತು. ನಂತರ ಕೆಳಗಡೆ ಕುಳಿತು ನಮಸ್ಕಾರ ಸಹ ಹಾಕಿತು. ಶ್ರೀಗಳ ಮೇಲೆ ಶ್ವಾನ ಭಕ್ತಿ ತೋರಿರುವುದು ನೆರೆದಿದ್ದ ಭಕ್ತರ ಗಮನ ಸೆಳೆಯಿತು.
Last Updated : Feb 3, 2023, 8:38 PM IST