ಬೀದರ್​ ಉತ್ಸವದಲ್ಲಿ ಮೇಳೈಸಿದ ಸಂಗೀತ; ಸಂಭ್ರಮದಲ್ಲಿ ತೇಲಾಡಿದ ಜನರು

By

Published : Jan 10, 2023, 8:37 AM IST

Updated : Feb 3, 2023, 8:38 PM IST

thumbnail

ಬೀದರ್: ಐತಿಹಾಸಿಕ ಕೋಟೆಯ ಆವರಣದಲ್ಲಿ 3 ದಿನಗಳ ಕಾಲ ಜಿಲ್ಲಾಡಳಿತ ಆಯೋಜಿಸಿರುವ ಬೀದರ್ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕೊನೆ ದಿನವಾದ ಸೋಮವಾರ ಜನಸಾಗರವೇ ಹರಿದು ಬಂದಿತ್ತು. ಬಾಲಿವುಡ್​ ಗಾಯಕ ಸುಖವಿಂದರ್​ ಸಿಂಗ್​, ಕನ್ನಡದ ಗಾಯಕ ವಿಜಯಪ್ರಕಾಶ್​, ನಟ ಶಿವರಾಜ್​ಕುಮಾರ್​, ಧನಂಜಯ್​, ನಟಿ ನಯನಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನೆಚ್ಚಿನ ಸಿನಿಮಾ ಹಾಡುಗಳು, ಗಾಯಕರ ಕಂಠಸಿರಿ ಜನರನ್ನು ಮೋಡಿ ಮಾಡಿತು. ಕಿಡ್ಸ್​ ಝೋನ್​ನಲ್ಲಿ ಮಕ್ಕಳು ಎಂಜಾಯ್​ ಮಾಡಿದರು. ವಿವಿಧ ಸರಕಾರಿ ಇಲಾಖೆಗಳ ಮಾಹಿತಿ ಕೇಂದ್ರಗಳು, ಸರ್ಕಾರೇತರ ಸಂಸ್ಥೆ, ಇತರೆ ಖಾಸಗಿ ಮಳಿಗೆಗಳಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಸ್ಥಳೀಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಕಲಾವಿದರು ಆಕರ್ಷಕ ಕಾರ್ಯಕ್ರಮಗಳೊಂದಿಗೆ ತಡರಾತ್ರಿವರೆಗೂ ಪ್ರೇಕ್ಷಕರನ್ನು ರಂಜಿಸಿದರು. ಮಂಗಳವಾರ ಬೆಳಗಿನವರೆಗೂ ಸುಖವಿಂದರ್ ಸಿಂಗ್ ಮತ್ತು ವಿಜಯಪ್ರಕಾಶ್​ ಸಂಗೀತ ರಸದೌತಣ ನಡೆಯಿತು. ಶಾಸಕ ರಹೀಮ್ ಖಾನ್ ಸೇರಿ ಇತರೆ ಗಣ್ಯರು ಕೂಡಾ ಕುಣಿದು ಕುಪ್ಪಳಿಸಿದರು.

Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.