'ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ': ಶಾಮನೂರು ಆರೋಪಕ್ಕೆ ಶಾಸಕ ಲಕ್ಷ್ಮಣ್​ ಸವದಿ ಹೇಳಿದ್ದೇನು?

By ETV Bharat Karnataka Team

Published : Oct 2, 2023, 4:21 PM IST

thumbnail

ಚಿಕ್ಕೋಡಿ(ಬೆಳಗಾವಿ): ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಶಾಸಕ ಲಕ್ಷ್ಮಣ್​ ಸವದಿ ಹೇಳಿದರು. ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲಸವೊಂದರ ನಿಮಿತ್ತವಾಗಿ ಎರಡು ದಿನ ಬೆಂಗಳೂರಿಗೆ ಭೇಟಿ ನೀಡುತ್ತಿದ್ದೇನೆ, ಅಲ್ಲಿ ಅವರನ್ನು ಭೇಟಿ ಮಾಡಿ ಅವರಿಗೆ ಏನು ಮಾಹಿತಿ ಇದೆ ಮತ್ತು ಯಾವ ಅರ್ಥದಲ್ಲಿ ಈ ರೀತಿ ಹೇಳಿದ್ದಾರೆ ಅನ್ನೋದನ್ನು ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಟಿಕೆಟ್​ಅನ್ನು ಕುರುಬ ಸಮಾಜದವರಿಗೆ ಹಂಚಿಕೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಕುರುಬ ಸಮುದಾಯದ ಮುಖಂಡರು ಲೋಕಸಭಾ ಟಿಕೆಟ್​ ಕೇಳುತ್ತಿರುವುದರಲ್ಲಿ ತಪ್ಪಿಲ್ಲ, ನಮ್ಮ ಜನಪ್ರತಿನಿಧಿಗಳು ಕೂಡ ರಾಜಕೀಯದಲ್ಲಿ ಇರಬೇಕೆಂದು ಪ್ರತಿ ಸಮುದಾಯ ಅಪೇಕ್ಷೆ ಪಡುತ್ತದೆ. ನಾಳೆ ಬೆಳಗಾವಿ ನಗರದಲ್ಲಿ ಒಂದೂವರೆ ಲಕ್ಷ ಜನರು ಸೇರಿಕೊಂಡು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಭಾಗವಹಿಸಲಿದ್ದಾರೆ. ಈ ವಿಚಾರವನ್ನು ಅವರ ಮುಂದೆ ಪ್ರಸ್ತಾಪಿಸಬಹುದು, ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ ಎಂದು ಸವದಿ ಹೇಳಿದರು.

ಶಿವಮೊಗ್ಗ ಕಲ್ಲು ತೂರಾಟ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿದೆ ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಆರೋಪದ ಕುರಿತು ಮಾತನಾಡಿ, ಈಶ್ವರಪ್ಪನವರು ಇಂತಹ ಆರೋಪ ಮಾಡುವುದು ಹೊಸದೇನಲ್ಲ ಎಂದು ತಿರುಗೇಟು ನೀಡಿದರು.  

ಇದನ್ನೂ ಓದಿ: 'ಬೀರು ಬೇಡ, ನೀರು ಬೇಕು; ಸಾರಾಯಿ ಬೇಡ, ಶಿಕ್ಷಣ ಬೇಕು': ಬೆಳಗಾವಿಯಲ್ಲಿ ಮದ್ಯ ನಿಷೇಧಿಸಲು ಮಹಿಳೆಯರ ಆಗ್ರಹ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.