ಕೇದಾರನಾಥ ವಿಮಾನ ಪತನ: ಘಟನಾ ಸ್ಥಳದಿಂದ ಪ್ರತ್ಯಕ್ಷ ಮಾಹಿತಿ

By

Published : Oct 18, 2022, 8:30 PM IST

Updated : Feb 3, 2023, 8:29 PM IST

thumbnail

ಕೇದಾರನಾಥ (ಉತ್ತರಾಖಂಡ್​​): ಹೆಲಿಕಾಪ್ಟರ್ ಪತನದ ಬಳಿಕ ಕೇದಾರನಾಥದಿಂದಲೇ ಕೋಲಾರ ಜಿಲ್ಲೆಯ ಗೌಡಗೆರೆ ಕ್ಷೇತ್ರದ ಧರ್ಮದರ್ಶಿಗಳಾದ ಮಲ್ಲೇಶ್ ಗುರೂಜಿಯವರು ಪ್ರತ್ಯಕ್ಷ ಮಾಹಿತಿ ನೀಡಿದ್ದಾರೆ. ಇಲ್ಲಿನ ಫಾಟಾದಿಂದ ಕೇದಾರನಾಥ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಸೇರಿದಂತೆ 7 ಮಂದಿ ದುರ್ಮರಣಕ್ಕೀಡಾಗಿದ್ದರು. ಕೇದಾರನಾಥ್ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿ ಈ ದುರಂತ ಸಂಭವಿಸಿದೆ. ಈ ಬಗ್ಗೆ ವಿಸ್ತೃತ ತನಿಖೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸೂಚಿಸಿದೆ. ಆರ್ಯನ್ ಏವಿಯೇಷನ್ ​​ಬೆಲ್ - 407 ಹೆಲಿಕಾಪ್ಟರ್ 8 ಪ್ರಯಾಣಿಕರೊಂದಿಗೆ ಕೇದಾರನಾಥ ಧಾಮದಿಂದ ಗುಪ್ತಕಾಶಿಗೆ ಹೊರಟಿತ್ತು.

Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.