ನಿರುದ್ಯೋಗ ಸಮಸ್ಯೆ ವಿರೋಧಿಸಿ ತೆಲಂಗಾಣ ಸರ್ಕಾರದ ವಿರುದ್ದ ಕೇಂದ್ರ ಸಚಿವರ ಉಪವಾಸ ಸತ್ಯಾಗ್ರಹ

By ETV Bharat Karnataka Team

Published : Sep 13, 2023, 11:03 PM IST

thumbnail

ಹೈದರಾಬಾದ್​: ಕಳೆದ ಒಂಬತ್ತು ವರ್ಷಗಳಿಂದ ತೆಲಂಗಾಣ ಸರ್ಕಾರ ನಿರುದ್ಯೋಗಿಗಳನ್ನು ನಿರ್ಲಕ್ಷಿಸಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಿಶನ್ ರೆಡ್ಡಿ ಇಂದಿರಾ ಪಾರ್ಕ್​ನಲ್ಲಿ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ನಾಳೆ ವರೆಗೂ ಸತ್ಯಾಗ್ರಹ ಮುಂದುವರೆಸುವದಾಗಿ ಹೇಳಿದ್ದ ವೇಳೆ ಪೊಲೀಸರು   ಕಿಶನ್ ರೆಡ್ಡಿ ಅವರನ್ನು ವಶಕ್ಕೆ ಪಡೆದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ತಡೆಯಲು ಮುಂದಾಗಿದ್ದು, ಕೆಲಕಾಲ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. 

ಧರಣಿ ವೇಳೆ ರಾಜ್ಯ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ದೀಕ್ಷೆ ಮುಂದುವರಿಸುವುದಾಗಿ ಕಿಶನ್ ರೆಡ್ಡಿ ಹೇಳಿದರು. ಪೊಲೀಸರು ಪ್ರತಿಭಟನೆಗೆ ಅಡ್ಡಿಪಡಿಸಲು ಮುಂದಾದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.  ಉಪವಾಸ ದೀಕ್ಷೆ ಶಾಂತಿಯುತವಾಗಿ ಮುಂದುವರಿದರೆ ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿರುವ ಅವರು ಗುರುವಾರ ಬೆಳಿಗ್ಗೆ ಉಪವಾಸ ಸತ್ಯಾಗ್ರಹ ಮುಂದುವರೆಸಲಗಾವುದು ಎಂದು ಕಿಶನ್ ರೆಡ್ಡಿ ಸ್ಪಷ್ಟಪಡಿಸಿದರು.  ಸಮಯ ಮೀರುತ್ತಿದ್ದಂತೆ ಪೊಲೀಸರು ಕಿಶನ್ ರೆಡ್ಡಿಯನ್ನು ವಶಕ್ಕೆ ಪಡೆದು ಪಕ್ಷದ ಕಚೇರಿಗೆ ಕರೆದೊಯ್ದರು. ಪೊಲೀಸರ ವರ್ತನೆಯನ್ನು ವಿರೋಧಿಸಿ ಕಿಶನ್ ರೆಡ್ಡಿ ಪಕ್ಷದ ಕಚೇರಿಯಲ್ಲೇ ಧರಣಿ ನಡೆಸಿದರು. ನಾಳೆ ಬೆಳಗಿನ ಜಾವದವರೆಗೂ ತಮ್ಮ ದೀಕ್ಷೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗವನ್ನು ಬರ ಜಿಲ್ಲೆಯನ್ನಾಗಿ ಘೋಷಿಸಲು ಕೃಷಿ ಸಚಿವರಿಗೆ ಮನವಿ: ಮಧು ಬಂಗಾರಪ್ಪ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.