ಔಷಧಕ್ಕೆಂದು ಮೆಡಿಕಲ್ ಶಾಪ್​ಗೆ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು

By ETV Bharat Karnataka Team

Published : Oct 5, 2023, 10:07 AM IST

thumbnail

ಮೈಸೂರು: ಮೆಡಿಕಲ್ ಶಾಪ್​ಗೆ ಔಷಧ ತಗೆದುಕೊಳ್ಳಲು ಬಂದ ವ್ಯಕ್ತಿಯೊಬ್ಬರು ಮೆಡಿಕಲ್ ಶಾಪ್ ಬಾಗಿಲಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಳೆದ ಮಂಗಳವಾರ ನಗರದ ಕ್ಯಾತಾಮರನಹಳ್ಳಿ ಮೆಡಿಕಲ್ ಶಾಪ್ ಬಳಿ ನಡೆದಿದೆ. 

ಈ ದೃಶ್ಯ ಮೆಡಿಕಲ್ ಶಾಪ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬರು ಎದೆ ಉಜ್ಜುತ್ತಾ ಮೆಡಿಕಲ್​ ಶಾಪ್​ಗೆ ಬಂದು, ಔಷಧ ಕೇಳುತ್ತಿರುವುದು. ಶಾಪ್​ ಎದುರು ನಿಂತ ಸ್ವಲ್ಪ ಹೊತ್ತಲ್ಲೇ ಕುಸಿದು ಬಿದ್ದಿರುವುದು. ಅಂಗಡಿಯವರು ಓಡಿ ಹೋಗಿ ವಿಚಾರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.  

ನಗರದ ಕ್ಯಾತಾಮರನಹಳ್ಳಿಯ ಮೆಡಿಕಲ್ ಶಾಪ್​ಗೆ ಔಷಧ ತಗೆದುಕೊಳ್ಳಲು ಬಂದ ಜಗದೀಶ್ (38) ಹೃದಯಾಘಾತದಿಂದ ಮೆಡಿಕಲ್ ಶಾಪ್ ಕೌಂಟರ್​ ಎದುರೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಔಷಧ ತಗೆದುಕೊಳ್ಳಲು ಮೆಡಿಕಲ್ ಶಾಪ್​ಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಜಗದೀಶ್ ಅವರು ಕ್ಯಾತಾಮರನಹಳ್ಳಿಯಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಾರ್‌ ಕ್ಯಾಶಿಯರ್​ಗೆ ಚಾಕು ಇರಿದ ದುಷ್ಕರ್ಮಿಗಳು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.