40 ಮಂದಿ ಪ್ರಯಾಣಿಸುತ್ತಿದ್ದ ಆರ್ಟಿಸಿ ಬಸ್ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ: ಮುಂದಾಗಿದ್ದೇನು?
ಕೃಷ್ಣಾ( ಆಂಧ್ರಪ್ರದೇಶ): ಸಂಚರಿಸುತ್ತಿದ್ದ ಆರ್ಟಿಸಿ ಬಸ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ವಿಜಯವಾಡದಿಂದ ಗುಡಿವಾಡಕ್ಕೆ ಬಸ್ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಪೆದಪರುಪುಡಿ ಮಂಡಲದ ಪುಲವರ್ತಿ ಗುಡೆಂ ಬಳಿ ಬರುತ್ತಿದ್ದಂತೆಯೇ ಬಸ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದ ವೇಳೆ ಸುಮಾರು 40 ಮಂದಿ ಪ್ರಯಾಣಿಕರಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ದಿಢೀರ್ ಬೆಂಕಿ ಹೊತ್ತಿಕೊಂಡಿದ್ದರಿಂದ ಪ್ರಯಾಣಿಕರು ಕೆಲಕಾಲ ಭಯಭೀತರಾಗಿದ್ದರು.
Last Updated : Feb 3, 2023, 8:29 PM IST