ಕಾನ್ಪುರದಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಪ್ರಚಾರ: ರಣ್​ವೀರ್ ​ - ಆಲಿಯಾ ಕಂಡು ಸಂತಸಪಟ್ಟ ಅಭಿಮಾನಿಗಳು

By

Published : Jul 22, 2023, 10:24 PM IST

thumbnail

ಕಾನ್ಪುರ (ಉತ್ತರಪ್ರದೇಶ): ಬಾಲಿವುಡ್​ ಬಹುಬೇಡಿಕೆ ನಟರಾದ ರಣ್​ವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ನಟನೆಯ ರೊಮ್ಯಾಂಟಿಕ್ ಸಿನಿಮಾ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'. ಇನ್ನೇನು ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಜೋಡಿಯು ರಾಷ್ಟ್ರದ ಪ್ರಮುಖ ನಗರಗಳಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಇಂದು ಉತ್ತರಪ್ರದೇಶದ ಕಾನ್ಪುರದಲ್ಲಿ ಚಿತ್ರದ ಪ್ರೊಮೋಷನ್​ ಕೈಗೊಂಡರು.  

ಲ್ಯಾಂಡ್‌ಮಾರ್ಕ್ ಹೋಟೆಲ್‌ನ ಒಂಬತ್ತನೆಯ ಮಹಡಿಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಣ್​ವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಕಂಡು ಅಭಿಮಾನಿಗಳು ಖುಷಿ ಪಟ್ಟರು. ಇದೊಂದು ಕೌಟುಂಬಿಕ ಚಿತ್ರ. ನೀವೆಲ್ಲರೂ ಕುಟುಂಬ ಸಮೇತರಾಗಿ ಥಿಯೇಟರ್​ಗೆ ಬಂದು ಸಿನಿಮಾ ನೋಡಬೇಕು ಎಂದು ಸ್ಟಾರ್​ ತಾರೆಯರು ತಮ್ಮ ಫ್ಯಾನ್ಸ್​  ಕೇಳಿಕೊಂಡರು. 

ಮುಂದಿನ ಬಾರಿ ಕಾನ್ಪುರಕ್ಕೆ ಬಂದಾಗ ನನ್ನ ಪತ್ನಿ ದೀಪಿಕಾಗೆ ತುಗ್ಗು ಲಡ್ಡು ತಿನ್ನಿಸುತ್ತೇನೆ ಎಂದು ಹೇಳುವ ಮೂಲಕ ರಣ್​ವೀರ್​ ಜನರನ್ನು ಖುಷಿಪಡಿಸಿದರು. ಆಲಿಯಾ ಭಟ್ ಅವರು ಕಾನ್ಪುರವನ್ನು ಸಂತೋಷದ ನಗರ ಎಂದು ಕರೆದರು. ಖಂಡಿತವಾಗಿಯೂ ಈ ನಗರವು ತುಂಬಾ ಸುಂದರವಾಗಿದೆ. ಇಲ್ಲಿನ ಜನ ತುಂಬಾ ಒಳ್ಳೆಯವರು. ಇಲ್ಲಿನ ಜನರಿಂದ ನಮಗೆ ಅಪಾರ ಪ್ರೀತಿ ಸಿಕ್ಕಿದೆ ಎಂದು ಹೇಳಿದರು.

ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ. ಇದೇ ಜುಲೈ 28ರಂದು ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ: 'ಬ್ರೋ' ಟ್ರೇಲರ್​ ರಿಲೀಸ್​: ಪವನ್​ ಕಲ್ಯಾಣ್ ​- ಸಾಯಿ ತೇಜ್ ​ಕಾಂಬೋ ಸೂಪರ್​

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.