'ಕೈ'ಕೊಟ್ಟು ಮತ್ತೆ ಕಮಲ ಅರಳಿಸಲಿದ್ದಾರೆ ಬೀದರ್ ಜನ-ಭಗವಂತ ಖೂಬಾ ವಿಶ್ವಾಸ
![ETV Thumbnail thumbnail](https://etvbharatimages.akamaized.net/etvbharat/images/320-214-3069432-thumbnail-3x2-bdrjpg.jpg)
ಬೀದರ್: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಕೈ ಕೊಟ್ಟು ಮತ್ತೊಮ್ಮೆ ಕಮಲಕ್ಕೆ ಭಾರಿ ಬಹುಮತದ ಗೆಲುವು ಸಿಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೊದಲ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನ ಮತ್ತೊಮ್ಮೆ ನಮಗೆ ಅವಕಾಶ ಮಾಡಿಕೊಡಲಿದ್ದಾರೆ. ಈಗಾಗಲೇ ಪ್ರಚಾರ ವೇಳೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆಗೆ ಪ್ರಚಾರಕ್ಕೆ ಹೊದಲೆಲ್ಲಾ ಮೋದಿ ಮೋದಿ ಎಂಬ ಘೋಷಣೆ ಎದುರಿಸುವಂತಾಗಿದ್ದು, ಈ ಬಾರಿ ಮತದಾರರು ಬಿಜೆಪಿಯತ್ತ ಒಲವು ತೋರಿಸಿರುವುದು ಸ್ಪಷ್ಟವಾಗ್ತಿದೆ ಎಂದರು.
TAGGED: