ಸಿಎಎ, ಎನ್​​ಆರ್​ಸಿ ವಿರುದ್ಧ ತಮಿಳುನಾಡಿನಲ್ಲಿ ಬೃಹತ್​ ಪ್ರತಿಭಟನೆ

By

Published : Mar 18, 2020, 8:42 PM IST

thumbnail

ಚೆನ್ನೈ (ತಮಿಳುನಾಡು): ರಾಜಕೀಯೇತರ ಇಸ್ಲಾಮಿಕ್ ಸಂಘಟನೆಯಾದ ತಮಿಳುನಾಡು ಥೌಹೀದ್ ಜಮಾತ್ (ಟಿಎನ್‌ಟಿಜೆ) ಸದಸ್ಯರು ಸೇರಿದಂತೆ ನೂರಾರು ಪ್ರತಿಭಟನಾಕಾರರು ಮದ್ರಾಸ್ ಹೈಕೋರ್ಟ್ ಬಳಿ ಜಮಾಯಿಸಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರಾರ್ (ಎನ್‌ಪಿಆರ್) ರದ್ದುಗೊಳಿಸುವಂತೆ ಒತ್ತಾಯಿಸಿದರು. ಇಲ್ಲಿನ ಪ್ಯಾರಿಸ್ ಕಾರ್ನರ್‌ನಲ್ಲಿರುವ ಹೈಕೋರ್ಟ್ ಬಳಿ 'ಜೈಲು ಭರೋ' ಪ್ರತಿಭಟನೆ ನಡೆಯುತ್ತಿದೆ. ಒಂದು ತಿಂಗಳಿನಿಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ವಿರೋಧಿಸಿ ವಾಶರ್‌ಮ್ಯಾನ್‌ಪೇಟ್‌ನಲ್ಲಿ ಪತ್ರಿಭಟಿಸುತ್ತಿದ್ದ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ತಮ್ಮ ಆಂದೋಲನವನ್ನು ಹಿಂತೆಗೆದುಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.