ರಾಷ್ಟ್ರೀಯ ವೈದ್ಯರ ದಿನ: ಮರಳು ಕಲಾಕೃತಿ ಮೂಲಕ ಪಟ್ನಾಯಕ್ ನಮನ
ಪುರಿ (ಒಡಿಶಾ): ದೇವರ ನಂತರದ ಸ್ಥಾನ ವೈದ್ಯರಿಗೆ ನೀಡಲಾಗುವುದು. ಅವರ ಸಮರ್ಪಣೆ ಮತ್ತು ಅಮೂಲ್ಯವಾದ ಸೇವೆಗಾಗಿ ಸಲಾಂ ಎಂದು ಒಡಿಶಾದ ಭುವನೇಶ್ವರ ಮೂಲಕ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ವೈದ್ಯರನ್ನು ನಮಿಸಿದ್ದಾರೆ. ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಪುರಿ ಬೀಚ್ ತೀರದಲ್ಲಿ ತಮ್ಮ ಮರಳು ಕಲಾಕೃತಿ ರಚಿಸಿ ವೈದ್ಯರಿಗೆ ಗೌರವ ಸಲ್ಲಿಸಿದ್ದಾರೆ.