ಪಿಂಚಣಿ ಹಣಕ್ಕಾಗಿ ತಂದೆಯ ಅಂಗಿ ಕಳಚಿ ಹಲ್ಲೆ ಮಾಡಿದ ಮಗ! ವಿಡಿಯೋ...
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ದೂಪಾಡುವಿನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಪಿಂಚಣಿ ಹಣಕ್ಕಾಗಿ ಮಗನೊಬ್ಬ ಹೆತ್ತ ತಂದೆ ಮೇಲೆ ದಾರುಣವಾಗಿ ಹಲ್ಲೆ ನಡೆಸಿದ್ದಾನೆ. ಗ್ರಾಮದ ಸುಬ್ಬಯ್ಯರಿಗೆ (75) ವೃದ್ಧಾಪ್ಯ ಪಿಂಚಣಿ ಬರುತ್ತೆ. ಸುಬ್ಬಯ್ಯರಿಗೆ ಡಿಸೆಂಬರ್ ತಿಂಗಳಿನ ಪಿಂಚಣಿ ಬಂದಿದೆ. ಆ ಹಣ ನನಗೆಬೇಕೆಂದು ಮಗ ಕೇಳಿದ್ದಾನೆ. ಹಣ ನೀಡಲು ಸುಬ್ಬಯ್ಯ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಗ ಕಟ್ಟಿಗೆಯಿಂದ ಸುಬ್ಬಯ್ಯ ಅವರನ್ನ ಅಂಗಿ ಕಳಚಿ ಬರಿ ಮೈಯಲ್ಲೇ ಥಳಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಮಗನಿಂದ ಸುಬ್ಬಯ್ಯನನ್ನು ಕಾಪಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.