ಹೆಂಡತಿ ಮಂಗಳಸೂತ್ರ ಮಾರಿ ಸೈಕಲ್ ಖರೀದಿಸಿ ತವರಿನತ್ತ ಹೊರಟ ವಲಸೆ ಕಾರ್ಮಿಕ!
ಒಡಿಶಾ: ದೇಶಾದ್ಯಂತ ಲಾಕ್ಡೌನ್ ಮುಂದುವರಿಕೆಯಾಗಿರುವ ಕಾರಣ ವಲಸೆ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಮಿತ್ರಾ, ಒಡಿಶಾದ ಕಟಕ್ ತೆರಳಲು ಹೆಂಡತಿ ಕೊರಳಲ್ಲಿದ್ದ ಮಂಗಳಸೂತ್ರ ಮಾರಿ ಸೈಕಲ್ ಖರೀದಿ ಮಾಡಿ, ತವರಿನತ್ತ ಪ್ರಯಾಣ ಬೆಳೆಸಿದ್ದಾಗಿ ಹೇಳಿಕೊಂಡಿದ್ದಾರೆ. ಇವರ ಕಷ್ಟ ಅರಿತ ಕೆಲ ಸಾಮಾಜಿಕ ಕಾರ್ಯಕರ್ತರು ಊಟ, ನೀರು ನೀಡಿ ಮಿನಿ ಟೆಂಪೋದಲ್ಲಿ ಊರಿಗೆ ತೆರಳುವ ವ್ಯವಸ್ಥೆ ಮಾಡಿಸಿದ್ದಾರೆ.