ಡಿ.ಕೆ ಶಿವಕುಮಾರ್​ ಶ್ಲಾಘಿಸಿದ ಸುಧಾಕರ್: ಸಚಿವರಿಂದ ಡಿ.ಕೆ ಬ್ರದರ್ಸ್​ ಗುಣಗಾನ ​

By

Published : Feb 13, 2023, 3:49 PM IST

Updated : Feb 14, 2023, 11:34 AM IST

thumbnail

ರಾಮನಗರ: "ಡಿ.ಕೆ ಶಿವಕುಮಾರ್ ಅವರ ಗೆಲುವಿನ ಅಂತರವನ್ನು ನಾನು ಸೂಕ್ಷವಾಗಿ ಗಮನಿಸುತ್ತಿದ್ದೇನೆ. ಮೊದಲು ಕಡಿಮೆ ಮಾರ್ಜಿನ್​ನಲ್ಲಿ ಗೆಲ್ತಾ ಇದ್ರು‌, ಬರಬರುತ್ತಾ 75 ಸಾವಿರ ಲೀಡ್​ಗೆ ಹೋಯ್ತು. ಡಿಕೆಶಿ ಅವರು ನರೇಗಾದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಯಾವಾಗಲೂ ರಾಜಕೀಯದಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವ ಇರಬೇಕು. ಒಳ್ಳೆಯದು ಮಾಡಿದಾಗ ಹೊಗಳಬೇಕು" ಎಂದು ಆರೋಗ್ಯ ಸಚಿವ ಡಾ. ಸುಧಾಕರ್​ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರನ್ನು ಶ್ಲಾಘಿಸಿದರು. 

ಕನಕಪುರದಲ್ಲಿ ಹೆರಿಗೆ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, "ಸಂಸದರು ಯಾವಾಗ ನಿದ್ದೆ ಮಾಡ್ತಾರೋ ಗೊತ್ತಿಲ್ಲ‌. ಕನಕಪುರಕ್ಕೆ ಮೂರು ಕಣ್ಣು ಇದೆ ಅಂತ ಕೆಲವರು ಹೇಳ್ತಾರೆ. ಅದು ಯಾವುದು ಎಂದರೆ, ಡಿ‌ಕೆ ಸುರೇಶ್, ಡಿ.ಕೆ ಶಿವಕುಮಾರ್ ಮತ್ತು ಎಂಎಲ್​ಸಿ ರವಿ ಅವರು. ಈ ಮೂವರು ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲದೇ ಕೆಲಸ ಮಾಡಿದ್ದಾರೆ" ಎಂದು ಡಿ.ಕೆ ಬ್ರದರ್ಸ್ ಅನ್ನು ಸಚಿವರು ಹಾಡಿ ಹೊಗಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಆರೋಪ, ಈ ಬಾರಿ ರಾಹುಲ್​ ಗಾಂಧಿ ವಿರುದ್ಧ ಕ್ರಮ; ಪ್ರಹ್ಲಾದ್​​ ಜೋಶಿ

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.