ETV Bharat / state

ಪಂಚಮಸಾಲಿ ಮೀಸಲಾತಿಗಾಗಿ ಅ. 15ರಿಂದ ಮತ್ತೆ ಉಗ್ರ ಹೋರಾಟ: ವಿಜಯಾನಂದ ಕಾಶಪ್ಪನವರ್

author img

By

Published : Apr 6, 2021, 8:58 PM IST

vijayananda-kshappanavar-
ವಿಜಯಾನಂದ ಕಾಶಪ್ಪನವರ್

2ಎ ಮೀಸಲಾತಿ ನೀಡುವಂತೆ ಪಂಚಮಸಾಲಿ ಮತ್ತೆ ಪ್ರತಿಭಟನೆಗಿಳಿಯುವ ಎಚ್ಚರಿಕೆ ರವಾನಿಸಿದ್ದಾರೆ. ಈಗಾಗಲೇ ನೀಡಿದ್ದ ಗಡುವು ಮುಗಿದಿದೆ. ಈ ಹಿನ್ನೆಲೆ ಅಕ್ಟೋಬರ್ 15ರಿಂದ ಮತ್ತೆ ಹೋರಾಟ ಮಾಡುವ ಮನ್ಸೂಚನೆ ನೀಡಿದ್ದಾರೆ.

ವಿಜಯಪುರ: 2ಎ ಮೀಸಲಾತಿ ಬೇಡಿಕೆ ಈಡೇರಿಸುವುದಾಗಿ 6 ತಿಂಗಳ ಗಡುವು ಕೊಟ್ಟಿದ್ದಾರೆ. ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 15ರಿಂದ ಮತ್ತೆ ಉಗ್ರ ಹೋರಾಟ ಆರಂಭವಾಗಲಿದೆ ಎಂದು ಮಾಜಿ ಶಾಸಕ‌‌ ವಿಜಯಾನಂದ ಕಾಶಪ್ಪನವರ್ ಎಚ್ಚರಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿಎಂ ಅವರು ಮೀಸಲಾತಿ ಕುರಿತು ಅವರ ಮಾತಿಗೆ ಗೌರವ ಕೊಟ್ಟು ಹೋರಾಟ ಸ್ಥಗಿತಗೊಳಿಸಿದ್ದೇವೆ. ಇದು ನಮ್ಮ ಕೊನೆಯ ಹೋರಾಟ, ಮಾಡು ಇಲ್ಲವೆ ಮಡಿ ಎಂಬ ರೂಪದಲ್ಲಿದೆ ಎಂದರು.

ಬಳಿಕ ಮಾತನಾಡಿದ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, 6 ತಿಂಗಳಲ್ಲಿ ಬೇಡಿಕೆ ಈಡೇರಿಸೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಒಂದು ವೇಳೆ ಈಡೇರದಿದ್ರೆ ಮತ್ತೆ 20 ಲಕ್ಷ ಜನರನ್ನು ಸೇರಿಸಿ ಅಕ್ಟೋಬರ್ 15ಕ್ಕೆ ಮಹಾ ರ್ಯಾಲಿ ಮಾಡಲಾಗುವುದು ಎಂದರು.

ಪಂಚಮಸಾಲಿ ಮೀಸಲಾತಿಗೆ ಅ. 15ರಿಂದ ಮತ್ತೆ ಉಗ್ರ ಹೋರಾಟ

ಈಗಿರುವ ಸರ್ಕಾರ ನಮ್ಮ ಹೋರಾಟ ನಿಲ್ಲಿಸಲು ಸಾಕಷ್ಟು ಪ್ರಯತ್ನಪಟ್ಟಿದೆ. ನಮ್ಮ ಸಮಾಜದ ಇಬ್ಬರು ಜನಪ್ರತಿನಿಧಿಗಳು ಈ ಹೋರಾಟ ತಡೆ ಹಿಡಿಯಲು ಪ್ರಯತ್ನಿಸಿದರು. ಆದ್ರೆ ಸತ್ಯದ, ನ್ಯಾಯದ ಪರವಾದ ಹೋರಾಟ ನಿಲ್ಲಲಿಲ್ಲ. ಪಂಚಮಸಾಲಿ ದೊಡ್ಡ ಸಮಾಜ, ಈ ಸಮಾಜಕ್ಕೆ ನ್ಯಾಯ ಕೊಡಿಸುವ ಹೋರಾಟಕ್ಕೆ ಯಾರು ಮುಂದಾಗಿದ್ದಾರೋ ಅವರನ್ನು ತುಳಿಯುವ ಕೆಲಸ ಮೊದಲಿನಿಂದಲೂ ನಡೆದಿದೆ ಎಂದರು.

ಈಗ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ವೋಟ್​ ಬ್ಯಾಂಕ್ ಇರೋದೇ ಪಂಚಮಸಾಲಿಯಲ್ಲಿ. ನಾವು ಯಡಿಯೂರಪ್ಪ ಅವರನ್ನು ನಂಬಿದ್ದೀವಿ ಎಂದಿದ್ದಾರೆ.

ಇದನ್ನೂ ಓದಿ: ಸಾಂಸ್ಕೃತಿಕ ನಗರಿಯಲ್ಲಿ ಊಟಿ ಮಾದರಿಯ ಗಾಜಿನ ಬಾಟಲ್ ಬಳಕೆಗೆ ಚಿಂತನೆ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.