ETV Bharat / state

ವರುಣಾರ್ಭಟಕ್ಕೆ ನಡುಗಡ್ಡೆಯಂತಾದ ಗುಮ್ಮಟನಗರಿ.. ಯಾಕಪ್ಪಾ ಮಳೆರಾಯ ಹಿಂಗ್‌ ಗಂಟುಬಿದ್ದಿ..

author img

By

Published : Oct 21, 2019, 10:59 PM IST

ನಿನ್ನೆ ರಾತ್ರಿ ವಿಜಯಪುರ ನಗರದಲ್ಲಿ ಸುರಿದ ಭಾರಿ ಮಳೆಗೆ ನಗರ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ನಗರದ ಹಲವು ಬಡಾವಣೆಗಳಿಗೆ ನೀರು ನುಗ್ಗಿದ್ದು ನಡುಗಡ್ಡೆಯಂತಾಗಿ ಮನೆಯಿಂದ ಹೊರಬದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವರುಣಾರ್ಭಕ್ಕೆ ನಡುಗಡ್ಡೆಯಂತಾದ ಗುಮ್ಮಟನಗರಿ

ವಿಜಯಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ವಿಜಯಪುರ ನಗರ ತತ್ತರಿಸಿ ಹೋಗಿದೆ. ನಗರದ ಹಲವು ಬಡಾವಣೆಗಳಲ್ಲಿ ನೀರು ನುಗ್ಗಿದ್ದು ರಾತ್ರಿ ಇಡೀ ಜನ ಪರದಾಡುವಂತಾಗಿದೆ. ಬಾಗವಾನನಗರ, ಬಬಲೇಶ್ವರ ನಾಕಾ, ಬಸ್ ನಿಲ್ದಾಣ ಉಪಲಬುರುಜ್ ಸೇರಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದೆ. ನಗರ ಸೇರಿ ಜಿಲ್ಲಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು ಜನ ಹೈರಾಣಾಗಿದ್ದಾರೆ. ನಗರದ ಬಬಲೇಶ್ವರ ನಾಕಾ ಬಳಿಯ ಹಳೆಯ ಬಾಗವಾನ ಬಡಾವಣೆ ಸೇರಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನೀರು ನುಗ್ಗಿ ನಡುಗಡ್ಡೆಯಂತಾಗಿದ್ದು, ಮನೆಯಲ್ಲಿರುವ ಜನರು ಹೊರಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವರುಣಾರ್ಭಕ್ಕೆ ನಡುಗಡ್ಡೆಯಂತಾದ ಗುಮ್ಮಟನಗರಿ..

ಕಳೆದ ಹಲವು ವರ್ಷಗಳಿಗೆ ಈ ಬಡಾವಣೆ ಮಳೆಗೆ ತುತ್ತಾಗುತ್ತಲೇ ಇದೆ. ಅಥಣಿ ರಸ್ತೆ, ಬಸ್ ನಿಲ್ದಾಣ ರಸ್ತೆಗಳಿಗೆ ಕೊಂಡಿಯಾಗಿರುವ ಈ ಬಡಾವಣೆಯ ಮುಖ್ಯ ರಸ್ತೆಯಿಂದ ಸ್ವಲ್ಪ ತಗ್ಗು ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಾರಣ ಮಳೆ ಬಂದರೆ ಸಾಕು ನಡುಗಡ್ಡೆಯಾಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಜನ ಬೇಸತ್ತು ಹೋಗಿದ್ದಾರೆ.

ಇನ್ನು, ಕಳೆದ ರಾತ್ರಿ ಸುರಿದ ಮಳೆಗೆ ಜನ ಭಯಭೀತರಾಗಿದ್ದಾರೆ. ಮನೆಗಳಿಗೆ ನೀರು ನುಗ್ಗಿರುವ ಕಾರಣ ಸುತ್ತಮುತ್ತಲಿನ ದೇವಸ್ಥಾನದಲ್ಲಿ ಆಶ್ರಯ ಪಡೆಯುವಂತಾಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರುಪಾಲಾಗಿವೆ. ಮಹಿಳೆಯರು, ಮಕ್ಕಳು ಬೀದಿಪಾಲಾಗಿದ್ದು ಅವರ ರೋಧನೆ ಮುಗಿಲು ಮುಟ್ಟಿತ್ತು.

ಹಲವು ವರ್ಷಗಳಿಂದ ಮಳೆ ಬಂದಾಗೊಮ್ಮೆ ಇದೇ ಪರಿಸ್ಥತಿ ನಿರ್ಮಾಣವಾಗುತ್ತದೆ. ಇದರಿಂದ ಬೇಸತ್ತ ಸ್ಥಳೀಯರು ಮಹಾನಗರಪಾಲಿಕೆ ವಿರುದ್ದ ಹಿಡಿಶಾಪ ಹಾಕುವಂತಾಗಿದೆ. ಈಗಲಾದರೂ ಮಹಾನಗರ ಪಾಲಿಕೆ ಈ ಬಡಾವಣೆಯಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ವಿಜಯಪುರ ನಗರ ತತ್ತರಿಸಿ ಹೋಗಿದೆ. ನಗರದ ಹಲವು ಬಡಾವಣೆಗಳಲ್ಲಿ ನೀರು ನುಗ್ಗಿದ್ದು ರಾತ್ರಿ ಇಡೀ ಜನ ಪರದಾಡುವಂತಾಗಿದೆ. ಬಾಗವಾನ ನಗರ, ಬಬಲೇಶ್ವರ ನಾಕಾ, ಬಸ್ ನಿಲ್ದಾಣ ಉಪಲಬುರುಜ್ ಸೇರಿದಂತೆ ನಗರದ ತೆಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ವಾಯ್ಸ್ 1: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದೆ. ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು ಜನ ಹೈರಾಣಾಗಿದ್ದಾರೆ. ವಿಜಯಪುರದ ನಗರದ ಬಬಲೇಶ್ವರ ನಾಕಾ ಬಳಿಯ ಹಳೆಯ ಬಾಗವಾನ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಿಗೆ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ನೀರು ನುಗ್ಗಿ ನಡುಗಡ್ಡೆಯಾಗಿದೆ. ಮನೆಯಲ್ಲಿರುವ ಜನರು ಹೊರಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ವರ್ಷಗಳಿಗೆ ಈ ಬಡಾವಣೆ ಮಳೆಗೆ ತುತ್ತಾಗುತ್ತಲೇ ಇದೆ. ಅಥಣಿ ರಸ್ತೆ, ಬಸ್ ನಿಲ್ದಾಣ ರಸ್ತೆಗಳಿಗೆ ಕೊಂಡಿಯಾಗಿರುವ ಈ ಬಡಾವಣೆಯ ಮುಖ್ಯ ರಸ್ತೆಯಿಂದ ಸ್ವಲ್ಪ ತೆಗ್ಗು ಪ್ರದೇಶದಲ್ಲಿ ಬಡಾವಣೆ ನಿರ್ಮಾಣವಾಗಿರುವ ಕಾರಣ ಮಳೆ ಬಂದರೆ ಸಾಕು ನಡುಗಡ್ಡೆಯಾಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಜನ ಬೇಸತ್ತು ಹೋಗಿದ್ದಾರೆ.
ಬೈಟ್-1 ಬಸೀರ್ ಸ್ಥಳೀಯ ನಿವಾಸಿ
ವಾಯ್ಸ್ 2: ಕಳೆದ ರಾತ್ರಿ ಸುರಿದ ಮಳೆಯಿಂದ ಮನೆಯಲ್ಲಿದ್ದ ಜನ ಭಯಭೀತರಾಗಿದ್ದಾರೆ. ಮನೆಗಳಿಗೆ ನೀರು ನುಗ್ಗಿರುವ ಕಾರಣ ಸುತ್ತಮುತ್ತಲಿನ ದೇವಸ್ಥಾನದಲ್ಲಿ ಆಶ್ರಯ ಪಡೆಯುವಂತಾಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರುಪಾಲಾಗಿವೆ. ಮಹಿಳೆಯರು, ಮಕ್ಕಳು ಬೀದಿಪಾಲಾಗಿದ್ದು ಅವರ ರೋಧ ಮುಗಿಲು ಮುಟ್ಟಿತ್ತು.
ಬೈಟ್-2 ರತ್ನವ್ವ ಸ್ಥಳೀಯ ನಿವಾಸಿ
ವಾಯ್ಸ್ 3: ಕಳೆದ ಹಲವು ವರ್ಷಗಳಿಂದ ಮಳೆ ಬಂದಾಗೊಮ್ಮೆ ಪಡುತ್ತಿರುವ ಪಾಡಿನಿಂದ ಬೇಸತ್ತು, ಸ್ಥಳೀಯರು ಮಹಾನಗರಪಾಲಿಕೆ ವಿರುದ್ದ ಹಿಡಿಶಾಪ ಹಾಕುವಂತಾಗಿದೆ. ಈಗಲಾದರು ಮಹಾನಗರ ಪಾಲಿಕೆ ಈ ಬಡಾವಣೆಯಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.